ಪಿಒಪಿ ಗೌರಿ-ಗಣೇಶ ಮೂರ್ತಿಗಳನ್ನು ಖರೀದಿಸಿ ಪೂಜಿಸಬಾರದು: ಮೇಯರ್ ಮನವಿ

ಬೆಂಗಳೂರು, ಸೆ.9- ಸಾರ್ವಜನಿಕರು ಈ ಬಾರಿ ಪಿಒಪಿ ಗೌರಿ-ಗಣೇಶ ಮೂರ್ತಿಗಳನ್ನು ಖರೀದಿಸಿ ಪೂಜಿಸಬಾರದು ಎಂದು ಮೇಯರ್ ಸಂಪತ್‍ರಾಜ್ ಮನವಿ ಮಾಡಿದರು.
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಕಬ್ಬನ್ ಉದ್ಯಾನವನ ದ್ವಾರದ ಬಳಿ ಬಿಬಿಎಂಪಿ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಸಾರ್ವಜನಿಕರಲ್ಲಿ ಪರಿಸರ ಗಣಪತಿ ಹಬ್ಬ ಆಚರಣೆ ಬಗ್ಗೆ ಬೀದಿ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಸಾಲಿನಲ್ಲಿ ಪರಿಸರಕ್ಕೆ ಪೂರಕವಾದ ಗಣಪತಿ ವಿಗ್ರಹಗಳನ್ನು ಪೂಜಿಸುವ ಕುರಿತು ಸಾರ್ವಜನಿಕರಲ್ಲಿ ಪಾಲಿಕೆ ವತಿಯಿಂದ ಅರಿವು ಮೂಡಿಸಲಾಗಿದೆ. ಗಣೇಶಮೂರ್ತಿ ಮಾರಾಟದ ಸ್ಥಳಗಳಲ್ಲೂ ತಿಳುವಳಿಕೆ ಮೂಡಿಸಲಾಗುತ್ತಿದೆ. ಹಾಗಾಗಿ ಶೇ.90ಕ್ಕಿಂತ ಹೆಚ್ಚು ಮಂದಿ ಪರಿಸರ ಗಣಪತಿಯನ್ನು ಕೊಂಡು ಸಾರ್ವಜನಿಕರು ಸಾಂಪ್ರದಾಯಿಕವಾಗಿ ಪೂಜಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದು ಹೇಳಿದರು.
ಮಾರಾಟಗಾರರಿಗೂ ಪಿಒಪಿ ಗೌರಿ-ಗಣೇಶ ಮೂರ್ತಿಗಳನ್ನು ಮಾರದಂತೆ ಕಡ್ಡಾಯವಾಗಿ ಸೂಚಿಸಲಾಗಿದೆ ಎಂದರು. ಇಂದು ಬಿಬಿಎಂಪಿ ಕ್ಷೇಮಾಭಿವೃದ್ಧಿ ಸಂಘದವರು ಪರಿಸರ ಸ್ನೇಹಿ ಗಣಪನ ವಿಗ್ರಹಗಳನ್ನು ಉಚಿತವಾಗಿ ನೀಡುವ ಮೂಲಕ ಮಾದರಿಯಾಗಿದ್ದಾರೆ ಎಂದು ವೆÅಚ್ಚುಗೆ ವ್ಯಕ್ತಪಡಿಸಿದರಲ್ಲದೆ ಈ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುವಂತೆ ಮೇಯರ್ ಸೂಚಿಸಿದರು.

ಈ ವೇಳೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್‍ರಾಜ್ ಮಾತನಾಡಿ, ಪಾಲಿಕೆ ಆವರಣದ ಗಾಜಿನ ಮನೆಯಲ್ಲಿ ಸ್ಥಳಾವಕಾಶ ನೀಡಿದರೆ ನಾಳೆಯಿಂದಲೇ ಸಾರ್ವಜನಿಕರಿಗೆ ಉಚಿತವಾಗಿ ಪರಿಸರ ಸ್ನೇಹಿ ಗಣಪನ ಮೂರ್ತಿಗಳನ್ನು ವಿತರಿಸುವುದಾಗಿ ತಿಳಿಸಿದರು. ಇದಕ್ಕೆ ಮೇಯರ್ ಸಮ್ಮತಿಸಿದರು.
ನಂತರ ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ ಮಾತನಾಡಿ, ಚಿಕ್ಕಮಕ್ಕಳು ಬಣ್ಣಬಣ್ಣದ ಗಣಪತಿಗಳು, ಪಿಒಪಿ ವಿಗ್ರಹಗಳ ಬಗ್ಗೆ ಆಕರ್ಷಿ ತರಾಗುತ್ತಾರೆ. ಅವುಗಳನ್ನೇ ಕೊಳ್ಳುವಂತೆ ಹಠ ಹಿಡಿಯುವುದು ಸಹಜ. ಹಾಗಾಗಿ ತಂದೆ-ತಾಯಿ ಮಕ್ಕಳಿಗೆ ತಿಳಿ ಹೇಳಿ ಪರಿಸರ ಗಣಪತಿ ಪೂಜಿಸುವ ಬಗ್ಗೆ ಮತ್ತು ಅದರಿಂದಾಗುವ ಪ್ರಯೋಜನದ ಬಗ್ಗೆ ಮನವರಿಕೆ ಮಾಡಬೇಕು, ಪರಿಸರ ಉಳಿಸಬೇಕೆಂದು ಕರೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ