ನವದೆಹಲಿ: ದೇಶಭ್ರಷ್ಟ ಉದ್ಯಮಿ ಮೆಹುಲ್ ಚೊಕ್ಸಿಗೆ ಆಂಟಿಗುವಾದ ನಾಗರಿಕತೆ ಪಡೆದು ಅಲ್ಲಿ ಹೂಡಿಕೆ ಮಾಡಲು ನಿಯಂತ್ರಕ ಸೆಬಿ ಯಾವುತ್ತೂ ಕೂಡ ಕ್ಲೀನ್ ಚಿಟ್ ವರದಿ ನೀಡಿರಲಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಮಾರುಕಟ್ಟೆಯಲ್ಲಿ ಹಣದ ವಂಚನೆಗೆ ಸಂಬಂಧಪಟ್ಟಂತೆ ಸೆಬಿ ತನಿಖೆಯನ್ನು ಮುಂದುವರಿಸಿದೆ. ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಲಕ್ಷಾಂತರ ಕೋಟಿ ರೂಪಾಯಿ ವಂಚನೆ ಎಸಗಿರುವ ಬಗ್ಗೆ ತನಿಖೆ ನಡೆಯುತ್ತಿದೆ.ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿಗೆ ಆಂಟಿಗುವಾದ ನಾಗರಿಕತ್ವ ನೀಡಿರುವ ಬಗ್ಗೆ ಕೂಡ ಸೆಬಿ ನೊಟೀಸ್ ಕಳುಹಿಸಿ ವಿಚಾರಣೆ ನಡೆಸಲು ಮುಂದಾಗಿದೆ. ಕಳೆದ ವಾರ, ಆಂಟಿಗುವಾ ಮಾಧ್ಯಮವೊಂದು ವರದಿ ಮಾಡಿ ಕೆರೆಬಿಯನ್ ದೇಶವಾದ ಆಂಟಿಗುವಾದ ಹೂಡಿಕೆ ಘಟಕದ ನಾಗರಿಕತ್ವವನ್ನು(ಸಿಐಯು) ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿಗೆ ನಾಗರಿಕತ್ವ ನೀಡಿ ಅಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಿತ್ತು. ಇದಕ್ಕೆ ಭಾರತದ ಕಡೆಯಿಂದ ಯಾವುದೇ ಆಕ್ಷೇಪ ಬಂದಿರಲಿಲ್ಲ ಎಂದು ಹೇಳಿತ್ತು.ವರದಿಯಲ್ಲಿ ಹೇಳಿರುವಂತೆ ಸಿಐಯು ಭಾರತದ ಸೆಬಿಯಿಂದ ಪಡೆದುಕೊಂಡ ದಾಖಲೆಗಳ ಪ್ರಕಾರ 2014 ಮತ್ತು 2017ರಲ್ಲಿ ಚೊಕ್ಸಿ ಒಡೆತನದ ಕಾರ್ಪೊರೇಟ್ ಸಂಸ್ಥೆ ವಿರುದ್ಧ ತನಿಖೆ ಕೈಗೊಂಡಿತ್ತು.
Related Articles
ಹಲವು ಪಾಸ್ ಪೋರ್ಟ್ ಗಳ ಸಹಾಯದಿಂದ ದೇಶದಿಂದ ದೇಶಕ್ಕೆ ಪರಾರಿಯಾಗುತ್ತಿರುವ ನೀರವ್ ಮೋದಿ…
June 16, 2018
Samachar Network-CLB
ರಾಷ್ಟ್ರೀಯ, ವಾಣಿಜ್ಯ, ಕ್ರೈಮ್
Comments Off on ಹಲವು ಪಾಸ್ ಪೋರ್ಟ್ ಗಳ ಸಹಾಯದಿಂದ ದೇಶದಿಂದ ದೇಶಕ್ಕೆ ಪರಾರಿಯಾಗುತ್ತಿರುವ ನೀರವ್ ಮೋದಿ…
Seen By: 2,300 ನವದೆಹಲಿ:ಜೂ-16: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿ ಹಲವು ಪಾಸ್ ಪೋರ್ಟ್ ಗಳ ಸಹಾಯದಿಂದ ವಿವಿಧ [more]
ನೀರವ್ ಮೋದಿ ದೇಶಬಿಡಲು ಸಹಾಯ ಮಾಡಿದ್ದ ಬಿಜೆಪಿಯೇ ಚುನಾವಣೆಗಾಗಿ ಆತನನ್ನು ಬಂಧಿಸಿ ವಾಪಸ್ ಕರೆತರುತ್ತಿದೆ: ಗುಲಾಮ್ ನಬಿ ಆಜಾದ್
March 21, 2019
Samachar Network-CLB
ರಾಷ್ಟ್ರೀಯ
Comments Off on ನೀರವ್ ಮೋದಿ ದೇಶಬಿಡಲು ಸಹಾಯ ಮಾಡಿದ್ದ ಬಿಜೆಪಿಯೇ ಚುನಾವಣೆಗಾಗಿ ಆತನನ್ನು ಬಂಧಿಸಿ ವಾಪಸ್ ಕರೆತರುತ್ತಿದೆ: ಗುಲಾಮ್ ನಬಿ ಆಜಾದ್
Seen By: 77 ನವದೆಹಲಿ:ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀರವ್ ಮೋದಿಯನ್ನು ಬಂಧಿಸಿ ವಾಪಸ್ ಕರೆತರುವ ನಾಟಕವನ್ನು ಬಿಜೆಪಿ ಆಡುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ [more]
ಪಿಎನ್ ಬಿ ವಂಚನೆ ಪ್ರಕರಣ: ಮೆಹುಲ್ ಚೋಕ್ಸಿ ಸಂಸ್ಥೆ ಕಾರ್ಯನಿರ್ವಾಹಕನ ಬಂಧನ
November 6, 2018
Samachar Network-CLB
ರಾಷ್ಟ್ರೀಯ
Comments Off on ಪಿಎನ್ ಬಿ ವಂಚನೆ ಪ್ರಕರಣ: ಮೆಹುಲ್ ಚೋಕ್ಸಿ ಸಂಸ್ಥೆ ಕಾರ್ಯನಿರ್ವಾಹಕನ ಬಂಧನ
Seen By: 28 ಕೋಲ್ಕತ್ತಾ: ಪಿಎನ್ ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮೆಹುಲ್ ಚೋಕ್ಸಿ ಅವರ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಬಂಧಿಸಿದ್ದಾರೆ. [more]