ಅಮರನಾಥ್ ಯಾತ್ರಿಕರ ಮೇಲೆ ದಾಳಿಗೆ 3 ಉಗ್ರ ಸಂಘಟನೆಗಳ ಸಂಚು

ನವದೆಹಲಿ:ಜು-೨೯: ಅಮರನಾಥ ಯಾತ್ರಿಕರ ಮೇಲೆ ಮತ್ತೆ ದಾಳಿ ನಡೆಸಲು ಮೂರು ಉಗ್ರರ ಗುಂಪು ಭಾರೀ ಸಂಸು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಪಾಕಿಸ್ತಾನ ಮೂಲದ ಮೂರು ಉಗ್ರ ಸಂಘಟನೆಗಳು ವಿಧ್ವಂಸಕ ಕೃತ್ಯವೆಸಗಲು ಒಗ್ಗೂಡಿದ್ದು, ಅಮರನಾಥ ಯಾತ್ರೆ ಮಾರ್ಗದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಉಗ್ರರ ಚಟುವಟಿಕೆಗಳ ಕುರಿತಂತೆ ಮಾಹಿತಿ ಕಲೆ ಹಾಕಿರುವ ಅಧಿಕಾರಿಗಳು ಭಾರೀ ಕಟ್ಟೆಚ್ಚರದಿಂದ ಇರುವಂತೆ ಎಚ್ಚರಿಕೆ ನೀಡಿದೆ. ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಅನ್ವಯ ಜಮ್ಮು ಮತ್ತು ಕಾಶ್ಮೀರದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಪಾಕಿಸ್ತಾನ ಮೂಲಕ ಲಷ್ಕರ್-ಇ-ತೊಯ್ಬಾ, ಜೈಷ್-ಇ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳು ಅಮರನಾಥ ಯಾತ್ರೆ ಮೇಲೆ ದಾಳಿ ನಡೆಸಲು ಸಂಚು ರೂಪಿಸಿವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಜೂನ್. 28 ರಿಂದ ಅಮರನಾಥ ಯಾತ್ರೆ ಆರಂಭಗೊಂಡಿದ್ದು, ಯಾತ್ರೆಯಲ್ಲಿ 2.5 ಲಕ್ಷ ಯಾತ್ರಿಕರು ಪಾಲ್ಗೊಂಡಿದ್ದಾರೆ. ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ದಿನದಂದು ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿವೆ. ಜುಲೈ.17 ಮತ್ತು 18 ರಂದು ಇಬ್ಬರು ಉಗ್ರರ ನಡುವೆ ನಡೆದಿರುವ ಸಂಭಾಷಣೆಯಲ್ಲಿ ಈ ಮಾಹಿತಿ ತಿಳಿದುಬಂದಿದೆ.

ಈ ಕುರಿತು ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ದಾಳಿಗೆ ಉಗ್ರರು ಸಂಚು ರೂಪಿಸಿರುವುದು ನಿಜ. ಆದರೆ, ಉಗ್ರರ ಯತ್ನಗಳು ಯಶಸ್ವಿಗೊಳ್ಳಲು ಬಿಡುವುದಿಲ್ಲ. ಈಗಾಗಲೇ ಎಲ್ಲಾ ರೀತಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆತ್ಮಾಹುತಿ ಬಾಂಬ್ ದಾಳಿ ಬೆದರಿಕೆ ಕೇವಲ ಕಾಶ್ಮೀರದಲ್ಲಿ ಅಷ್ಟೇ ಅಲ್ಲದೆ, ಪಂಜಾಬ್ ಮೇಲೂ ದಾಳಿ ದಾಳಿ ನಡೆಸುವ ಬೆದರಿಕೆಗಳು ಬಂದಿವೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿರುವ ಕೆಲ ವಾಂಟೆಡ್ ಉಗ್ರರು ಈಗಾಗಲೇ ಅಮರನಾಥ ಯಾತ್ರಾ ಮಾರ್ಗದ ಹತ್ತಿರವೇ ಇದ್ದು, ಎ++ ವಿಭಾಗದ ಉಗ್ರ ಎಲ್ಇಟಿ ಕಮಾಂಡರ್ ಐಜಾಜ್ ಅಲಿಯಾಸ್ ಅಬು ಹುರೈರಾ ಕೆಲ ಉಗ್ರರೊಂದಿಗೆ ಯಾತ್ರೆ ಮಾರ್ಗದಲ್ಲಿಯೇ ಇದ್ದಾನೆಂದು ಮೂಲಗಳು ತಿಳಿಸಿವೆ.

Amarnath Yatra Terrorist,Intelligence report,Terror attack,scath

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ