ಮನೆಗಳ ಬೀಗ ಒಡೆದು ಒಳನುಗ್ಗಿದ ಚೋರರು ಹಣ ಹಾಗೂ ಆಭರಣ ದೋಚಿ ಪರಾರಿ

 

ಬೆಂಗಳೂರು, ಜು.17- ಎರಡು ಮನೆಗಳ ಬೀಗ ಒಡೆದು ಒಳನುಗ್ಗಿದ ಚೋರರು ಹಣ ಹಾಗೂ ಆಭರಣ ದೋಚಿರುವ ಘಟನೆ ನಗರದಲ್ಲಿ ನಡೆದಿದೆ.
ಬೇಗೂರು:
ಹಾಡಹಗಲೇ ಗಾರ್ವೆಬಾವಿಪಾಳ್ಯದ 5ನೇ ಕ್ರಾಸ್, ಸೇಂಟ್ ಮಾರ್ಥಾಸ್ ಶಾಲೆ ಬಳಿಯ ನಿವಾಸಿ ಕುಮಾರಸ್ವಾಮಿ ಎಂಬುವರ ಮನೆಯ ಬೀಗ ಒಡೆದು ಒಳನುಗ್ಗಿದ ಚೋರರು 15 ಸಾವಿರ ಹಣ ಹಾಗೂ 2 ಚಿನ್ನದ ಉಂಗುರವನ್ನು ಕದೊಯ್ದಿದ್ದಾರೆ.
ನಿನ್ನೆ ಬೆಳಗ್ಗೆ ಕಾರ್ಯನಿಮಿತ್ತ ಕುಮಾರಸ್ವಾಮಿ ಕುಟುಂಬ ಹೊರಗೆ ಹೋಗಿ ರಾತ್ರಿ ಮನೆಗೆ ಹಿಂದಿರುಗುವಷ್ಟರಲ್ಲಿ ಕಳ್ಳರು ಮನೆ ದೋಚಿದ್ದಾರೆ.
ಬಗಲಗುಂಟೆ:
ಶಾಂತಿನಗರದ 5ನೇ ಕ್ರಾಸ್ ನಿವಾಸಿ ಬೇಬಿಬಾಯಿ ಎಂಬುವರು ನಿನ್ನೆ ಬೆಳಗ್ಗೆ ಹೊರಗೆ ಹೋಗಿ ವಾಪಸ್ ರಾತ್ರಿ ಹಿಂದಿರುಗುವುದರೊಳಗೆ ಕಳ್ಳರು ಇವರ ಮನೆ ಬೀಗ ಒಡೆದು ಒಳನುಗ್ಗಿ 8 ಗ್ರಾಂ ಆಭರಣ ಕಳ್ಳತನ ಮಾಡಿದ್ದಾರೆ.
ಈ ಎರಡೂ ಪ್ರಕರಣಗಳನ್ನು ಆಯಾ ಠಾಣೆ ಪೆÇಲೀಸರು ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ