ಕಾರಿನ ಗಾಜು ಒಡೆದ ಚೋರರು ಲ್ಯಾಪ್‍ಟಾಪ್ ದೋಚಿ ಪರಾರಿ

 

ಬೆಂಗಳೂರು, ಜು.17- ಕಾರಿನ ಗಾಜು ಒಡೆದ ಚೋರರು ಲ್ಯಾಪ್‍ಟಾಪ್ ದೋಚಿರುವ ಘಟನೆ ಎಚ್‍ಎಎಲ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಎಚ್‍ಎಎಲ್‍ನ ಮಾರತಳ್ಳಿ ಬ್ರಿಡ್ಜ್ ಬಳಿಯ ತಾನಾಜಿ ಪಾರ್ಕ್ ಬಳಿ ಅಶೋಕ್ ಕುಮಾರ್ ಎಂಬುವರು ರಾತ್ರಿ 8.40ರಲ್ಲಿ ಪಾರ್ಕಿಂಗ್ ಮಾಡಿ ಸಮೀಪದ ಹೋಟೆಲ್‍ನಲ್ಲಿ ಕಾಫಿ ಕುಡಿಯಲು ಹೋಗಿದ್ದರು.
ಈ ಸಂದರ್ಭದಲ್ಲಿ ಕಳ್ಳರು ಇವರ ಕಾರಿನ ಗಾಜು ಒಡೆದು ಲ್ಯಾಪ್‍ಟಾಪ್ ದೋಚಿದ್ದಾರೆ.
ಕೆಲ ಸಮಯದ ಬಳಿಕ ಅಶೋಕ್ ಕುಮಾರ್ ಅವರು ಕಾರಿನ ಬಳಿ ಬಂದಾಗಲೇ ಕಾರಿನ ಗಾಜು ಪಡೆದಿರುವುದು ಗೊತ್ತಾಗಿದೆ. ಈ ಬಗ್ಗೆ ಎಚ್‍ಎಎಲ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ