ಚಾಕುವಿನಿಂದ ಇರಿದು 200ರೂ. ಹಣ ಹಾಗೂ ಮೊಬೈಲ್ ಕಸಿದು ಪರಾರಿ

 

ಬೆಂಗಳೂರು, ಜು.17- ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಖಾಸಗಿ ಕಂಪೆನಿ ನೌಕರನ ಅಡ್ಡಗಟ್ಟಿದ ಮೂವರು ದರೋಡೆಕೋರರು ಚಾಕುವಿನಿಂದ ಇರಿದು 200ರೂ. ಹಣ ಹಾಗೂ ಮೊಬೈಲ್ ಕಸಿದು ಪರಾರಿಯಾಗಿರುವ ಘಟನೆ ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಂದು ಬೆಳಗಿನ ಜಾವ 1.40ರಲ್ಲಿ ವಿಶ್ವನಾಥ್ ಎಂಬುವರು ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದರು. ವಿಜಯನಗರ, ಆರ್‍ಪಿಸಿ ಲೇಔಟ್‍ನ ಅತ್ತಿಗುಪ್ಪೆ, ಮೆಟ್ರೋ ನಿಲ್ದಾಣದ ಬಳಿ ಮೂವರು ದರೋಡೆಕೋರರು ಇವರನ್ನು ಹಿಂಬಾಲಿಸಿ ಬೆದರಿಸಿ ಚಾಕುವಿನಿಂದ ಇರಿದು ಹಣ, ಮೊಬೈಲ್ ಕಸಿದು ಪರಾರಿಯಾಗಿದ್ದಾರೆ.
ಇರಿತದಿಂದ ಗಾಯಗೊಂಡ ವಿಶ್ವನಾಥ್ ಆಸ್ಪತ್ರೆಯಲ್ಲಿ ಹೊರಹೋಗಿಯಾಗಿ ಚಿಕಿತ್ಸೆ ಪಡೆದು ನಂತರ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ