ಪೆÇಲೀಸರ ಕೈಗೆ ಬೈಕ್ ಕಳ್ಳ

ಸೂಲಿಬೆಲೆ, ಜು.9- ರಾತ್ರಿ ಗಸ್ತಿನಲ್ಲಿದ್ದ ನಂದಗುಡಿ ಪೆÇಲೀಸರ ಕೈಗೆ ಬೈಕ್ ಕಳ್ಳನೊಬ್ಬ ಸಿಕ್ಕಿ ಬಿದ್ದಿದ್ದಾನೆ.
ಬೆಂಗಳೂರು ಕಸ್ತೂರಿ ಬಾಯಿ ನಗರದ ಇರ್ಪಾನ್ (22) ಬಂಧಿತ ಬೈಕ್ ಕಳ್ಳ.
ನಂದಗುಡಿ ಪೆÇಲೀಸ್ ಠಾಣೆಯ ಕಾನ್‍ಸ್ಟೇಬಲ್ ಗಂಗಬಸವಯ್ಯ ಬೆಂಗಳೂರು -ಚಿಂತಾಮಣೆ ಹೆದ್ದಾರಿಯಲ್ಲಿ ರಾತ್ರಿ ಗಸ್ತು ನಡೆಸಿ ರಾಜ್ಯ ಹೆದ್ದಾರಿ ಶಿವನಾಪುರ ಕ್ರಾಸ್ ಬಳಿ ಬೆಳಗಿನ ಜಾವ ಅನುಮಾನ್ಪದ ವಾಹನಗಳನ್ನು ತಪಾಸಣೆಮಾಡುತ್ತಿದ್ದಾಗ ಹೊಸಕೋಟೆ ಕಡೆಯಿಂದ ಚಿಂತಾಮಣೆ ಕಡೆಗೆ ಬೈಕಿನಲ್ಲಿ ಬರುತ್ತಿದ್ದ ಇರ್ಪಾನ್ ಪೆÇಲೀಸರನ್ನು ಕಂಡು ವಾಹನವನ್ನು ಹಿಂದಕ್ಕೆ ತಿರುಗಿಸಲು ಪ್ರಯತ್ನಿಸಿದ್ದಾನೆ.
ಇದರಿಂದ ಅನುಮಾನಗೊಂಡು ಪೆÇಲೀಸರು ಆತನನ್ನು ಬೆನ್ನಟ್ಟಿ ಹಿಡಿದು ವಿಚಾರಣೆ ಮಾಡಿದಾಗ ವಾಹನಕ್ಕೆ ಸಂಬಂಧಪಟ್ಟ ಯಾವುದೇ ದಾಖಲೆಗಳಿಲ್ಲದೆ ಇರುವುದು ಪತ್ತೆಯಾಗಿದೆ. ಎಲ್ಲೋ ಬೈಕನ್ನು ಕಳವು ಮಾಡಿಕೊಂಡು ಬಂದಿರುವುದು ಕಂಡು ಬಂದ ಹಿನ್ನಲೆಯಲ್ಲಿ ಇರ್ಪಾನ್‍ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪೆÇಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಠಾಣೆಯ ಸಿಪಿಐ ಹಾಗೂ ಪಿಎಸ್‍ಐ ಅಶೋಕ್ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಗೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ