ಕೀಟನಾಶಕ ಸೇವಿಸಿ ಮಹಿಳೆ ಆತ್ಮಹತ್ಯೆ

ಗೌರಿಬಿದನೂರು, ಜು.9- ಕ್ಷುಲ್ಲಕ ವಿಚಾರಕ್ಕೆ ಮಹಿಳೆಯೊಬ್ಬಳು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಮಂಚೇನಹಳ್ಳಿ ಹೋಬಳಿಯ ವರವಣಿ ಗ್ರಾಮದಲ್ಲಿ ನಡೆದಿದೆ. ಮಂಚೇನಹಳ್ಳಿ ಹೋಬಳಿಯ ವರವಣಿ ಗ್ರಾಮದ ಬಸವರಾಜು ಎಂಬುವವರ ಪತ್ನಿ ಕಾವ್ಯ(25) ಕೀಟನಾಶಕ ಸೇವಿಸಿ ಆತ್ಮಹತ್ಯೆ ಶರಣಾಗಿರುವ ಮಹಿಳೆ. ಕಾವ್ಯ ಚೊಕ್ಕೇನಹಳ್ಳಿ ಗ್ರಾಮದ ರೇಣುಕೇಶ್ವರ ಮತ್ತು ಪಾರ್ವತಮ್ಮ ಎಂಬುವವರ ಮಗಳಾಗಿದ್ದು, ಕಳೆದ ಆರು ವರ್ಷಗಳ ಹಿಂದೆ ಬಸವರಾಜುಗೆ ಮದುವೆ ಮಾಡಿಕೊಡಲಾಗಿತ್ತು. ಮೃತಳ ತೆಂಗಿ ನಿಶ್ಚಿತಾರ್ಥ ಭಾನುವಾರ ವಿದ್ದು , ಶನಿವಾರ ಶಾಲೆಯಿಂದ ಮಕ್ಕಳು ಬಂದ ನಂತರ ಸಂಜೆ ಮೇಲೆ ಹೋಗುವಂತೆ ಗಂಡ ಬಸವರಾಜು ಹೇಳಿದ್ದರಿಂದ ಬೇಸತ್ತು ಕಾವ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೆÇೀಷಕರು ಪೆÇಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆ ಎಸೈ ಮಂಜುನಾಥಗೌಡ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ