ಜಿಗುಪ್ಸೆಗೊಂಡ ಯುವಕ ನೇಣಿಗೆ ಶರಣು

Execution Sling Hanging Hangman Knot Penalty Rope

ಚಿಂತಾಮಣಿ, ಜು.9- ಜೀವನದಲ್ಲಿ ಜಿಗುಪ್ಸೆಗೊಂಡ ಬಿಹಾರದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಬಿಹಾರದ ಗಯಾ ಜಿಲ್ಲೆ ಗಂಗಹಾರ್ ಮನ್ಸೂರಿ ಗ್ರಾಮದ ವಾಸಿ ಶಬ್ಯುದ್ದೀನ್ ಆಲಂ (21) ತಾಲೂಕಿನ ತಿನಕಲ್ ಗ್ರಾಮದ ಬಳಿ ಹೊಂಗೆಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ವ್ಯಕ್ತಿ ಚಿಕ್ಕಬಳ್ಳಾಪುರ-ಮುಳುಬಾಗಿಲು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುತ್ತಿರುವ ಜೆ.ಎಸ್.ಅರ್. ಕಂಪನಿಯಲ್ಲಿ ಕೆಲಸಕ್ಕೆ ಬಂದಿದ್ದು, ತಿನಕಲ್ ಗ್ರಾಮದ ಬಳಿ ಕಂಪನಿಗೆ ಸೇರಿದ ಕ್ಯಾಂಪ್ ಇದ್ದು, ಅಲ್ಲಿ ಕೆಲಸಕ್ಕೆ ನೇಮಕಗೊಂಡು ಅಲ್ಲಿಯೇ ನಿರ್ವಹಿಸುತ್ತಿದ್ದ ಎಂದು ಗ್ರಾಮಾಂತರ ಠಾಣೆ ಪೆÇಲೀಸರು ತಿಳಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪಿಎಸ್‍ಐ ಲಿಯಾಖತ್ ಪ್ರಕರಣ ದಾಖಲು ಮಾಡಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ