ದೇಶಪಾಂಡೆಗೆ ಸಚಿವ ಸ್ಥಾನ : ಉ.ಕ.ಜಿಲ್ಲಾ ಕೊಂಕಣಿ ಪರಿಷತ್ ಹರ್ಷ

ಶಿರಸಿ :

ಆರ್. ವಿ. ದೇಶಪಾಂಡೆಯವರು ಗ್ರಾಮೀಣ ಅಭಿವೃದ್ಧಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಇದು ಕೊಂಕಣಿ ಭಾಷೆಗೆ ಸಂದ ಗೌರವವಾಗಿದೆ. ಈ ಹಿಂದೆ ಉ.ಕ.ಜಿಲ್ಲಾ ಕೊಂಕಣಿ ಪರಿಷತ್ತಿನ ಕಾರ್ಯಕ್ರಮ ಹಾಗೂ ಚಟುವಟಿಕೆಗಳಿಗೆ ಮಾನ್ಯರು ವಿಶೇಷ ಸಹಕಾರ ನೀಡಿದ್ದು, ಅಲ್ಲದೇ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೊಂಕಣಿ ಅಧ್ಯಯನ ಪೀಠ ಸ್ಥಾಪಿಸಲು ಬಜೆಟ್ನಲ್ಲಿ ವಿಶೇಷ ಅನುದಾನ ಘೋಷಿಸಿ ಕೊಡುಗೆಯನ್ನು ನೀಡಿದ್ದನ್ನು ಪರಿಷತ್ತು ಸ್ಮರಿಸಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಇವರಿಂದ ಕೊಂಕಣಿ ಭಾಷೆಯ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿ ಎಂದು ಪರಿಷತ್ತಿನ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ದೇಶಪಾಂಡೆಯವರನ್ನು ಅಭಿನಂದಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ