ದೇಶಪಾಂಡೆಯವರಿಗೆ ಸಚಿವ ಸ್ಥಾನ-ದಾಂಡೇಲಿಯಲ್ಲಿ ಹರ್ಷ

ದಾಂಡೇಲಿ : ರಾಜ್ಯದ ಅನುಭವಿ ಮತ್ತು ಹಿರಿಯ ರಾಜಕಾರಣಿ ಆರ್.ವಿ.ದೇಶಪಾಂಡೆಯವರಿಗೆ ನಿರೀಕ್ಷೆಯಂತೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ದೊರಕಿರುವುದಕ್ಕೆ ದಾಂಡೇಲಿಯಲ್ಲಿ ಹರ್ಷ ವ್ಯಕ್ತವಾಗಿದೆ.

ರಾಜ್ಯ ಕಂಡ ಅಪರೂಪದ ರಾಜಕಾರಣಿ, ಅಭಿವೃದ್ಧಿಯ ಹರಿಕಾರ ಆರ್.ವಿ.ದೇಶಪಾಂಡೆಯವರಿಗೆ ನಿರೀಕ್ಷೆಯಂತೆ ಸಚಿವ ಪದವಿ ದೊರೆತಿದೆ. ಕ್ಷೇತ್ರದ ಪ್ರಗತಿಯ ಜೊತೆಗೆ ಜಿಲ್ಲೆಯ ಅಭಿವೃದ್ಧಿಗೆ ಸದಾ ಕಂಕಣಬದ್ದರಾಗಿರುವ ದೇಶಪಾಂಡೆಯವರಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ದೇಶಪಾಂಡೆಯವರಿಗೆ ಸಚಿವ ಪದವಿ ದೊರೆತಿರುವುದು ನಮ್ಮ ಕ್ಷೇತ್ರಕ್ಕೆ ಬಹುದೊಡ್ಡ ಹೆಮ್ಮೆ ಎಂದು ನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ, ಯುವ ಕಾಂಗ್ರೇಸ್ ಕ್ಷೇತ್ರಾಧ್ಯಕ್ಷ ರಾಜೇಶ ರುದ್ರಪಾಟಿ, ಕಾಂಗ್ರೆಸ್ ಮುಖಂಡರುಗಳಾದ ರಾಧಾಕೃಷ್ಣ ಕನ್ಯಾಡಿ, ಆದಂ ದೇಸೂರು, ತಸ್ವರ ಸೌಧಾಗರ, ಎಸ್.ಎಸ್.ಪೂಜಾರ, ವಿಷ್ಣುಮೂರ್ತಿ ರಾವ್, ಇಕ್ಬಾಲ ಶೇಖ, ಬಸೀರ ಗಿರಿಯಾಳ, ದಿವಾಕರ ನಾಯ್ಕ, ಸತೀಶ ಬೆಂಡೆ, ಬಾಪು ಗೌಡ, ಅವಿನಾಶ ಗೋಡಕೆ, ಸೋಮಶೇಖರ, ರಾಮಲಿಂಗ ಜಾಧವ ಮೊದಲಾದವರು ಪತ್ರಿಕೆಯ ಜೊತೆ ಮಾತನಾಡಿ ಸಂತಸ ಹಂಚಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ