ಯಂಗ್ ಇಂಡಿಯಾ ಪರಿವಾರದ ೨೦ ನೇ ವಾರ್ಷಿಕ ಅಂಗವಾಗಿ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆ ಆಯೋಜನೆ

ಹುಬ್ಬಳ್ಳಿ ಜೂ೬- ಗದಗದ ಯಂಗ್ ಇಂಡಿಯಾ ಪರಿವಾರದ ೨೦ ನೇ ವಾರ್ಷಿಕ ಅಂಗವಾಗಿ ಇದೇ ಜೂ ೯ ಮತ್ತು ೧೦ ರಂದು ಗದಗ ನಗರದ ವಿ ಡಿಎಸ್ ಟಿಸಿ ಹೈಸ್ಕೂಲ್ ಮೈದಾನದಲ್ಲಿ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ ಎಂದು ಕಿರುತೆರೆ, ರಂಗಭೂಮಿ ನಟ ಭರಮಗೌಡ ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ ಅವರು, ಜೂ ೯ ಮತ್ತು ೧೦ ರಂದು ಎರಡು ದಿನಗಳ ಕಾಲ ಬೆಳಿಗ್ಗೆ ೯ ರಿಂದ ಸಂಜೆ ೬ ರವರೆಗೆ ನಡೆಯುವ ಸ್ಪರ್ಧೆಯಲ್ಲಿ ವಿಜೇತರಾದ ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಕಾಮಿಡಿ ಕಿಲಾಡಿಗಳ ತಂಡದೊಂದಿಗೆ ವೇದಿಕೆ ಮೇಲೆ ಹಾಡುವ ಅವಕಾಶವಿರುತ್ತದೆ ಎಂದರು.
ಸ್ಪರ್ಧೆಯಲ್ಲಿ ೧೦ ಸಾವಿರ, ೭ ಸಾವಿರ, ೫ ಸಾವಿರ ಕ್ರಮವಾಗಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಜೊತೆಗೆ ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದರು.
ಕಾರ್ಯಕ್ರಮದ ಆಯೋಜಕ ಪ್ರಭಾಕರ, ಮಿಮಿಕ್ರಿ ಕಲಾವಿದ ರಾಜು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ