ಎರಡು ಕೆ ಎಸ್ ಆರ್ ಟಿಸಿ ಬಸ್ ಗಳನಡುವೆ ಭೀಕರ ಅಪಘಾತ: ನಾಲ್ವರ ಸಾವು

ಕಲಬುರ್ಗಿ:ಜೂ-೨: ಎರಡು ಕೆಎಸ್‌ಆರ್‌ಟಿಸಿ ಬಸ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಜೇವರ್ಗಿಯಲ್ಲಿ ನಡೆದಿದೆ.

ಕಲಬುರಗಿಯಿಂದ ದಾವಣಗೆರೆಗೆ ಹೊರಟಿದ್ದ ಬಸ್ ಮತ್ತು ಸುರಪುರದಿಂದ ಕಲಬುರಗಿಗೆ ಆಗಮಿಸುತ್ತಿದ್ದ ಬಸ್ ಡಿಕ್ಕಿಯಾಗಿವೆ. ಸ್ಥಳದಲ್ಲೇ ಬಸ್ ಚಾಲಕ, ಮೂವರು ಮಹಿಳೆಯರು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನು 10 ಮಂದಿಗೆ ಗಾಯಗಳಾಗಿವೆ.

ಮೃತ ಮೂವರು ಮಹಿಳೆಯರು ಶಿಕ್ಷಕಿಯರಾಗಿದ್ದು, ಚಿಗರಹಳ್ಳಿ ಸರಕಾರಿ ಶಾಲೆಯ ಆಯೇಷಾ ಸಿದ್ದಕಿ, ಚಿಗರತಿ ಹಳ್ಳಿ ಶಾಲೆಯ ಫರೀನ್ ಬೇಗಂ, ಯಾಳವಾರ ಶಾಲೆಯ ಸಹರಾ ಕಲತೂನ್ ಎಂದು ತಿಳಿದುಬಂದಿದೆ.

ಗಾಯಾಳುಗಳನ್ನು ಜೇವರ್ಗಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ