ಜಿ.ಎಸ್.ಬಿ. ಸಮಾಜದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

Varta Mitra News

ಶಿರಸಿ :

ಶಿರಸಿ ತಾಲೂಕಾ ಜಿ.ಎಸ್.ಬಿ. ವೆಲ್ಫೇರ ಲೀಗ್ ವತಿಯಿಂದ ಈವರ್ಷ ಎಸ್.ಎಸ್.ಎಲ್.ಸಿ. ಪಾಸಾಗಿ ಪಿ.ಯು.ಸಿ.ಗೆ ಪ್ರವೇಶ ಪಡೆದಿರುವ ಮತ್ತು ಹಾಲೀ ಪಿ.ಯು.ಸಿ. ಎರಡನೇ ವರ್ಷದಲ್ಲಿ ಓದುತ್ತಿರುವ ಮತ್ತು ಪದವಿ ಕಾಲೇಜಿನಲ್ಲಿ ಈ ವರ್ಷ ಬಿ.ಎ. 1, ಬಿ.ಎಸ್.ಸಿ.1 ಹಾಗೂ ಬಿ.ಕಾಂ.1 ನೇ ವರ್ಗದಲ್ಲಿ ಓದುತ್ತಿರುವ ಶಿರಸಿ ತಾಲೂಕಿನ ಜಿ.ಎಸ್.ಬಿ. ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ತೀರ್ಮಾನಿಸಿದ್ದು, ಶ್ರೀ ಮಹಾವಿಷ್ಣು ದೇವರ 178ನೇ ವರ್ಧಂತಿ ಉತ್ಸವದ ವೇಳೆಗೆ ಜೂನ 16 ರಂದು ನಡೆಯುವ ಧರ್ಮಸಭೆಯಲ್ಲಿ ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜತೀರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಈ ಸ್ಕಾಲರಶಿಪ್ ವಿತರಣೆ ನಡೆಯಲಿದೆ. ಈ ಬಗ್ಗೆ ಅರ್ಜಿ ಫಾರ್ಮಗಳು ಶಿರಸಿಯ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಹಾಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಲಭ್ಯವಿದ್ದು ಸಮಾಜದ ವಿದ್ಯಾರ್ಥಿಗಳು ಈ ಅರ್ಜಿಗಳನ್ನು ಭರ್ತಿ ಮಾಡಿ ತಮ್ಮ ಹಿಂದಿನ ವರ್ಷದ ಮಾಕ್ಸ್ ಕಾರ್ಡ ನೊಂದಿಗೆ ಜೂನ್.10ರ ಒಳಗೆ ಶ್ರೀ ಮಹಾವಿಷ್ಣು ದೇವಸ್ಥಾನದ ಮೆನೇಜರರಲ್ಲಿ ತಲುಪಿಸಬೇಕೆಂದು ಅಧ್ಯಕ್ಷರಾದ ಡಾ.ವಿ.ಎಸ್.ಸೋಂದೆ ಹಾಗೂ ಕಾರ್ಯದರ್ಶಿ ಎಂ.ಎಸ್.ಪ್ರಭು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ