ಅಪಘಾತದ ನೆಪದಲ್ಲಿ ಕಾರು ಚಾಲಕನನ್ನು ಅಡ್ಡಗಟ್ಟಿ ಸುಲಿಗೆ: ಇಬ್ಬರ ಬಂಧನ

ಮೈಸೂರು, ಮೇ 30-ಅಪಘಾತದ ನೆಪದಲ್ಲಿ ಕಾರು ಚಾಲಕನನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಇಬ್ಬರು ಸುಲಿಗೆಕೋರರನ್ನು ಗ್ರಾಮಾಂತರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ನಗರದ ಎನ್.ಆರ್.ಮೊಹಲ್ಲಾ ನಿವಾಸಿಗಳಾದ ಮೊಹಮ್ಮದ್ ಜಮೀಲ್ ಮತ್ತು ಮಹಮ್ಮದ್ ಜಬ್ಬೀರ್ ಬಂಧಿತರು.
ಮೇ 21 ರಂದು ಪ್ರವೀಣ್ ಎಂಬುವರು ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಇಬ್ಬರು ಸುಲಿಗೆಕೋರರು ಬೈಕ್‍ನಲ್ಲಿ ಅವರನ್ನು ಹಿಂಬಾಲಿಸಿ ಇಲವಾಲ ವ್ಯಾಪ್ತಿಯ ರಸ್ತೆ ಬಳಿ ಕಾರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿದ್ದಾರೆ.
ಪ್ರವೀಣ್‍ರಿಗೆ ನೀನು ದಾರಿಯಲ್ಲಿ ಬರುತ್ತಿದ್ದಾಗ ಅಪಘಾತ ಮಾಡಿ ಕಾರು ನಿಲ್ಲಿಸದೆ ಹೋಗುತ್ತಿದ್ದೀಯ ಎಂದು ಬೆದರಿಸಿದ್ದಾರೆ. ನಾನು ಯಾವುದೇ ಅಪಘಾತ ಮಾಡಿಲ್ಲ ಎಂದು ಹೇಳಿದರೂ ಕೇಳದೆ ಪ್ರವೀಣ್ ಮೇಲೆ ಹಲ್ಲೆ ನಡೆಸಿದ ಸುಲಿಗೆಕೋರರು 8 ಸಾವಿರ ಹಣ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.
ತುರ್ತು ಕೆಲಸದ ನಿಮಿತ್ತ ಪ್ರವೀಣ್ ಬೆಂಗಳೂರಿಗೆ ತೆರಳಿದ್ದು, ಮೂರು ದಿನಗಳ ನಂತರ ಮೈಸೂರಿಗೆ ಬಂದು ಇಲವಾಲ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಿದ್ದ ದಕ್ಷಿಣ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಕರೀಂರಾವೂದ್ಕರ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ