ಆಂಬುಲೆನ್ಸ್ ಗೆ ಕಾಯದೇ ಬಾಲಕಿ ಮೃತದೇಹ ರವಾನೆ…ಪಿಎಸ್‌ಐ ಮಾನವೀಯತೆಗೆ ಜನರ ಸೆಲ್ಯೂಟ್‌

ಉಡುಪಿ,ಮೇ 30

ಮಳೆಯಿಂದಾಗುತ್ತಿರುವ ಸಾವು-ನೋವು, ನಷ್ಟದಿಂದ ಜನರು ಸಂಕಷ್ಟದಲ್ಲಿದ್ದಾರೆ. ಈ ಮಧ್ಯೆ ಪಡುಬಿದ್ರಿ ಪೊಲೀಸ್‌ ಅಧಿಕಾರಿವೋರ್ವರು ಮಾನವೀಯತೆ ಮೆರೆದಿರುವುದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಾಲಕಿ ನಿಧಿ ಆಚಾರ್ಯ ಮೃತದೇಹವನ್ನು ತಮ್ಮ ಜೀಪಿನಲ್ಲೇ ಪಿಎಸ್‌ಐ ಸಾಗಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ವೇಳೆ ಮೃತದೇಹ ಸಿಗುತ್ತಿದ್ದಂತೆ ಆಂಬುಲೆನ್ಸ್‌ಗಾಗಿ‌ ಕಾಯದೇ ಜೀಪಿನಲ್ಲಿ ಠಾಣಾಧಿಕಾರಿ‌ ಸತೀಶ್ ತೆಗೆದುಕೊಂಡು ಹೋಗಿದ್ದಾರೆ.

ಪೊಲೀಸ್ ಜೀಪಿನ‌ ಮೂಲಕ ಬಾಲಕಿಯ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸ್‌ ಅಧಿಕಾರಿಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ