ಮಡಿವಾಳ ಜನಾಂಗಕ್ಕೆ ವಿಧಾನಪರಿಷತ್ ಸದಸ್ಯನ ಸ್ಥಾನ ನೀಡಲು ಮನವಿ

ಬೆಂಗಳೂರು,ಮೇ 28- ಮಡಿವಾಳ ಜನಾಂಗಕ್ಕೆ ವಿಧಾನಪರಿಷತ್ ಸದಸ್ಯನ ಸ್ಥಾನ ನೀಡಬೇಕೆಂದು ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಜನಾಂಗವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ನಾವು ಮೊದಲೇ ಹಿಂದುಳಿದ ಜನಾಂಗದವರಾಗಿದ್ದೇವೆ. ಆದ್ದರಿಂದ ನಮ್ಮ ಜನಾಂಗಕ್ಕೆ ವಿಧಾನಪರಿಷತ್ ಸದಸ್ಯರ ಸ್ಥಾನ ನೀಡಬೇಕೆಂದರು.

ಜೆಡಿಎಸ್‍ನಿಂದ ಅಮರನಾಥ್, ಕಾಂಗ್ರೆಸ್‍ನ ಜಿ.ಡಿ.ಗೋಪಾಲ್, ಬಿಜೆಪಿಯಿಂದ ಎಚ್.ಲಕ್ಷ್ಮಣ್ ಇವರನ್ನು ಎಂಎಲ್‍ಸಿ ಮಾಡಬೇಕೆಂದು ಹೇಳಿದ ಅವರು, ಇದರಿಂದ ಜನಾಂಗದ ಏಳಿಗೆಗೆ ಅನುಕೂಲವಾಗಲಿದೆ. ಕಡಿಮೆ ಜನಸಂಖ್ಯೆ ಹೊಂದಿರುವ ನಮ್ಮ ಜನಾಂಗ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಶಕ್ತಿ ನಮಗಿಲ್ಲ . ಆದ್ದರಿಂದ ನನಗೆ ರಾಜಕೀಯ ಸೂಕ್ತ ಸ್ಥಾನಮಾನ ನೀಡಬೇಕೆಂದು ಮನವಿ ಮಾಡಿದರು.
ಖಜಾಂಚಿ ಸುಬ್ರಮಣ್ಯ ಗಿರಿಧರ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ