ಎಚ್ ಡಿಕೆ ಮಾತ್ರ ದೆಹಲಿಗೆ ಬರಲಿ, ಕಾಂಗ್ರೆಸ್ ನಾಯಕರು ಬೇಡ: ಕೈಕಮಾಂಡ್ ಸೂಚನೆ

ಬೆಂಗಳೂರು,ಮೇ 21

ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರ ದೆಹಲಿ ಪ್ರಯಾಣ ರದ್ದುಗೊಂಡಿದೆ ಎನ್ನಲಾಗಿದೆ. ಕುಮಾರಸ್ವಾಮಿ ಅವರು ದೆಹಲಿಗೆ ಆಗಮಿಸುತ್ತಿದ್ದು, ನಾವು ಅವರ ಜೊತೆ ಮಾತನಾಡುತ್ತೇವೆ, ಕಾಂಗ್ರೆಸ್ ನಾಯಕರು ದೆಹಲಿಗೆ ಬರೋದು ಬೇಡ ಎಂಬ ಸಂದೇಶ ಹೈಕಮಾಂಡ್ ನಿಂದ ರವಾನೆಯಾಗಿದೆ ಎಂದು ಮಾಧ್ಯಮದ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಭೇಟಿಗೆ ನಿಯೋಜಿತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಮಯ ನಿಗದಿಯಾಗಿದ್ದರಿಂದ ಇಂದು ಮಧ್ಯಾಹ್ನ ಎಚ್ ಡಿಕೆ ದೆಹಲಿಗೆ ತೆರಳಲಿದ್ದಾರೆ.

ಏತನ್ಮಧ್ಯೆ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ಮುಖಂಡರು ದೆಹಲಿಗೆ ಬರುವುದು ಬೇಡ ಎಂಬ ಸಂದೇಶ ರವಾನಿಸಿದೆ. ರಾಜ್ಯದ ಹಿತದೃಷ್ಟಿಯಿಂದ ಸಮನ್ವಯತೆ, ಬಾಂಧವ್ಯ ಮುಖ್ಯ ಹೀಗಾಗಿ ನಾವು ಕುಮಾರಸ್ವಾಮಿ ಅವರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೈಕಮಾಂಡ್ ಹೇಳಿದೆ ಎಂದು ವರದಿ ವಿವರಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ