ಸಂಸದ ಸಿ.ಎಸ್.ಪುಟ್ಟರಾಜು ಅವರು ರೈತ ಸಂಘದ ಕಾರ್ಯಕರ್ತ ದೀಕ್ಷಿತ್ ಎಂಬಾತನಿಗೆ ಕಪಾಳ ಮೋಕ್ಷ :

ಪಾಂಡವಪುರ, ಮೇ 13- ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿನಕುರಳಿ ಗ್ರಾಮದಲ್ಲಿ ಸಂಸದ ಸಿ.ಎಸ್.ಪುಟ್ಟರಾಜು ಅವರು ರೈತ ಸಂಘದ ಕಾರ್ಯಕರ್ತ ದೀಕ್ಷಿತ್ ಎಂಬಾತನಿಗೆ ಕಪಾಳ ಮೋಕ್ಷ ಮಾಡಿರುವ ಘಟನೆ ನಡೆದಿದೆ.
ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ದೀಕ್ಷಿತ್ ಮತ್ತವನ 6 ಜನ ಸಂಗಡಿಗರು ಜತೆಗೂಡಿ ಚಿನಕುರಳಿ ಜಿಪಂ ವ್ಯಾಪ್ತಿಯಲ್ಲಿ ಮತದಾನ ವೀಕ್ಷಿಸಲು ತೆರಳಿದ್ದ ಸಂದರ್ಭದಲ್ಲಿ ಸಂಸದ ಸಿ.ಎಸ್.ಪುಟ್ಟರಾಜು ಬೇರೆP ಡೆಯಿಂದ ನನ್ನ ಕ್ಷೇತ್ರಕ್ಕೆ ಬಂದು ಮತ ಪ್ರಚಾರ ನಡೆಸುತ್ತಿದ್ದೀರಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರಲ್ಲದೆ, ದೀಕ್ಷಿತ್ ಎಂಬುವರಿಗೆ ಕಪಾಳ ಮೋಕ್ಷ ಮಾಡಿದ್ದಾರೆಂದು ಹೇಳಲಾಗಿದೆ. ನಂತರ ಪುಟ್ಟರಾಜು ಅವರು ರೈತ ಸಂಘದ ಕಾರ್ಯಕರ್ತರು ಹೊರಗಡೆಯಿಂದ ಬಂದು ತಮ್ಮ ಕಾರಿನಲ್ಲಿ ಮಾರಕಾಸ್ತ್ರಗಳನ್ನು ಸಂಗ್ರಹಿಸಿದ್ದು, ಇಲ್ಲಿ ಗಲಭೆ ಮಾಡಲು ಬಂದಿದ್ದಾರೆ ಎಂದು ಸ್ಥಳದಲ್ಲಿದ್ದ ಪೆÇಲೀಸರಿಗೆ ಸೂಚಿಸಿದಾಗ, ಕಾರ್ಯಕರ್ತರನ್ನು ವಿಚಾರಣೆಗೊಳಪಡಿಸಿ ಅವರನ್ನು ಬಿಡುಗಡೆ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ