ಮತದಾನ ಎಲ್ಲರ ರಾಷ್ಡ್ರೀಯ ಕರ್ತವ್ಯ: ದೇವರ ಇಚ್ಚೆಯಂತೆ,ಜನರ ಇಚ್ಚೆಯಂತೆ ಸರಕಾರ ಬರಲಿದೆ:ಪೇಜಾವರ ಶ್ರೀ

ಉಡುಪಿ: ಮತದಾನ ಎಲ್ಲರ ರಾಷ್ಡ್ರೀಯ ಕರ್ತವ್ಯ ,ಹೀಗಾಗಿ ಬಂದು ಮತ ಚಲಾಯಿಸಿದ್ದೇನೆ. ದೇವರ ಇಚ್ಚೆಯಂತೆ ,ಜನರ ಇಚ್ಚೆಯಂತೆ ಸರಕಾರ ಬರಲಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿಯ ನಾರ್ತ್ ಸ್ಕೂಲ್ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಪೇಜಾವರ ಶ್ರೀಗಳು, ಯಾವ ಸರಕಾರ ಬರಲಿದೆ ಅಂತ ಭವಿಷ್ಯ ನುಡಿಯುವುದಿಲ್ಲ.ಆದರೆ ಎಲ್ಲರೂ ಮತ ಚಲಾಯಿಸಬೇಕು.ಅದು ರಾಷ್ಟ್ರೀಯ ಕರ್ತವ್ಯ ಎಂದರು.

ಗೌಪ್ಯ ಮತದಾನ ಸರಕಾರದ ಉದ್ದೇಶ.ಹೀಗಾಗಿ ಯಾರಿಗೆ ಮತ ಹಾಕಿದೆ ,ಯಾವ ಸರಕಾರ ಬರಲಿದೆ ಅಂತ ಹೇಳಲಾರೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ