ಕೊನೆಯ ದಿನದಲ್ಲಿ ಸೂರ್ಯಕಾಂತ ನಾಗಮಾರಪಳ್ಳಿ ಪ್ರಚಾರ ಜೋರು ಮೋದಿ ಬಿರುಗಾಳಿಯಲ್ಲಿ ಕಾಂಗ್ರೆಸ್ ಧೂಳಿಪಟ

ಬೀದರ್, ಮೇ 10- ಪ್ರಧಾನಿ ನರೇಂದ್ರ ಮೋದಿ ಬೀದರ್ ಭೇಟಿ ನೀಡಿದ ನಂತರದ ವಾತಾವರಣ ಸಂಪೂರ್ಣ ಬದಲಾವಣೆಯಾಗಿದೆ. ಕಾಂಗ್ರೆಸ್ ನಮಗಿಂತಲೂ ಬಹಳ ಹಿಂದೆ ಬಿದ್ದಿದೆ ಎಂದು ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.

ಬಹಿರಂಗ ಪ್ರಚಾರದ ಕೊನೆ ದಿನವಾದ ಗುರುವಾರ ಎಲ್ಲೆಡೆ ಭರ್ಜರಿ ಪ್ರಚಾರ ನಡೆಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸುನಾಮಿಗೆ ಕಾಂಗ್ರೆಸ್ ಧೂಳಿಪಟವಾಗಲಿದೆ. ಈ ಬಾರಿ ಕಾಂಗ್ರೆಸ್ ಹೀನಾಯವಾಗಿ ಸೋಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೀದರ್ ಕ್ಷೇತ್ರದ ಎಲ್ಲೆಡೆ ಅಭೂತಪೂರ್ವ ಬೆಂಬಲ ಸಿಗುತ್ತಿದ್ದು, ಎಲ್ಲ ಸಮಾಜದವರು ಬೆಂಬಲಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನನಗೆ ವಿಜನ್ ಹೊಂದಿದ್ದೇನೆ. ಎಲ್ಲ ಸಮಾಜ ಬಾಂಧವರ ಬೆಂಬಲ ನನಗಿದೆ ಎಂದರು.
ಪಕ್ಷದ ಎಲ್ಲ ಮುಖಂಡರ, ಪದಾಧಿಕಾರಿಗಳ ಸಾಥ್, ಸಹಭಾಗಿತ್ವ ಸಿಕ್ಕಿದೆ. ಯಾರೂ ಅತೃಪ್ತರಿಲ್ಲ, ಎಲ್ಲರೂ ಪ್ರಚಾರದಲ್ಲಿ ಸಕ್ರಿಯ ಭಾಗವಹಿಸಿದ್ದಾರೆ. ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದಾರೆ. ಬಿಜೆಪಿ ಗೆಲ್ಲಲೇಬೇಕು. ಬಿಎಸ್‍ವೈ ಸಿಎಂ ಆಗಬೇಕು, ಮೋದಿ ಕೈಬಲಗೊಳ್ಳಬೇಕೆಂಬ ಏಕೈಕ ಧ್ಯೇಯ ಎಲ್ಲರದ್ದಾಗಿದೆ. ಹೀಗಾಗಿ ಈ ಬಾರಿ ಬಿಜೆಪಿ ಗೆಲುವು ಖಚಿತ ಎದರು.

ನಾನು ಎಂದಿಗೂ ಜಾತಿ, ಧರ್ಮದ ರಾಜಕೀಯ ಮಾಡಿಲ್ಲ. ಎಲ್ಲ ವರ್ಗದವರ ಬಗ್ಗೆ ನನಗೆ ಗೌರವವಿದೆ. ನನಗೂ ಎಲ್ಲರೂ ಅಷ್ಟೇ ಪ್ರೀತಿ ತೋರಿಸುತ್ತಿದ್ದಾರೆ. ನುಡಿದಂತೆ ನಡೆವ ಸ್ವಭಾವ ನನ್ನದು. ಅಧಿಕಾರ ಇಲ್ಲದಿದ್ದಾಗಲೇ ಅನೇಕ ಕೆಲಸ ಮಾಡಿ ತೋರಿಸಿz್ದÉೀನೆ. ಅಧಿಕಾರ ಕೊಟ್ಟರೆ ಕ್ಷೇತ್ರ ಮಾದರಿ ಮಾಡುವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ