ಡಿ.ಕೆ. ಶಿವಕುಮಾರವರಿಗೆ ಸೋಲಿನ ಭಯ?

ತುಮಕೂರು ಮೇ-9. ಡಿ.ಕೆ. ಶಿವಕುಮಾರವರಿಗೆ ಸೋಲಿನ ಭಯ ಶುರುವಾಗಿದೆಯೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದ್ದ ಪರಿಣಾಮ ಸ್ವಾಮೀಜಿಯ ಮೊರೆ ಹೋದರೆ.
ಚುನಾವಣೆ ದಿನ ಗಣನೆ ಇರುವಾಗ ಕಾಂಗ್ರೆಸ್ ನಾಯಕರಿಗೆ ಆಂತಕ ಶುರುವಾಗಿದೆ ಇದಕ್ಕೆ ಗೌಪ್ಯವಾಗಿ ಭವಿಷ್ಯ ಕೇಳಲು ತುಮಕೂರಿನ ಮಠವೊಂದಕ್ಕೆ ಡಿ.ಕೆ ಶಿವಕುಮಾರ್‍ಅವರು ಭೇಟಿ ನೀಡಿದ್ದಾರೆ .  ನೋಣವಿನ ಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಶ್ರೀ ಕರಿ ವೃಷಭ ದೇಶಿಕೇಂದ್ರ ಸ್ವಾಮೀಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಸುಮಾರು ಎರಡುವರೆ ಘಂಟೆಗಳ ಕಾಲ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಕಾಡಸಿದ್ದೇಶ್ವರ ಮಠದ ಶ್ರಿಗಳ ಅವರು ನೀವು ಆತಂಕ ಪಡುವ ಅವಶ್ಯಕತೆ ಇಲ್ಲ ರಾಜಕೀಯದಲ್ಲಿ ನಿಮ್ಮ ಭವಿಷ್ಯ ಉಜ್ವಲಾವಾಗಿದೆ. ನೀವು ಧೈರ್ಯದಿಂದ ಇರಿ ಎಂದು ಡಿ.ಕೆ ಶಿವಕುಮಾರವರಿಗೆ ಆತ್ಮಶ್ಥೈರ್ಯ ತುಂಬಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ