ಆರ್.ಎಸ್‍ಎಸ್ ಬಿಜೆಪಿ ಯವರು ದೇಶಕ್ಕಾಗಿ ಬಲಿದಾನ ಮಾಡಿದ್ದು ಸಾಬೀತು ಮಾಡಿದರೆ ನಾನು ನಿಮ್ಮ ಗುಲಾಮನಾಗುತ್ತೇನೆ – ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ. ಮೇ-9. ಆರ್.ಎಸ್‍ಎಸ್ ಬಿಜೆಪಿ ಯವರು ದೇಶಕ್ಕಾಗಿ ಬಲಿದಾನ ಮಾಡಿದ್ದು ಸಾಬೀತು ಮಾಡಿದ್ದಾರೆ ನಾನು ನಿಮ್ಮ ಗುಲಾಮನಾಗುತ್ತೇನೆ ಎಂದು ಲೋಕಸಭೆಯ ಕಾಂಗ್ರೆಸ್ ಪಕ್ಷದ ಸಂಸಯದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಗೆ ಸವಾಲು ಹಾಕಿದ್ದಾರೆ.
ಕಾಂಗ್ರೆಸ್‍ನವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಕೊಟ್ಟಿದ್ದಾರೆ ಎಂಬುದನ್ನು ಪ್ರಧಾನಿಯವರು ಅರಿಯಬೇಕು ಎಂದಿದ್ದಾರೆ ದೇಶದಲ್ಲೇಡೆ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರು ಲೋಕಸಭೆಯಲ್ಲಿ ಹೊರಗೆ ಪ್ರಧಾನಿ ತುಟಿ ಬಿಚ್ಚಿಲ್ಲ ಎಂದರು.
ನಗರದ ಗಂಗಾನಗರ ಬಡಾವಣೆಯಲ್ಲಿ ಚುನಾವಣೆ ಪ್ರಚಾರ ನಮ್ಮ ಪ್ರಾಧ್ಯೇಶಿಕ ಮತದಾರರು ಪ್ರಧಾನಿಯವರು ತಮ್ಮ ಘಣತೆ ಗೌರವಕ್ಕೆ ತಕ್ಕ ಹಾಗೆ ಮಾತನಾಡಬೇಕೆಂದರು.
ಮುಧೋಳನಾಯಿಗಿರುವ ನಿಯತ್ತು ಕಾಂಗ್ರೆಸ್‍ಗೆ ಇಲ್ಲ ಎಂದು ಸಾರ್ವಜನಿಕರ ಸಭೆಯಲ್ಲಿ ಮೋದಿಯವರು ಮಾತನಾಡಿದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ಖರ್ಗೆ ಕೀಳುಮಟ್ಟದಲ್ಲಿ ಮಾತನಾಡುವುದನ್ನು ಅವರು ಬಿಡಬೇಕು ಇದು ಶೋಭೆ ತರುವಂಥದಲ್ಲ ಎಂದರು.
ಉರಿ ಬಿಸುಲಿನಲ್ಲಿಯೇ ಅವರು ವಿವಿಧ ಗ್ರಾಮಗಳಿಗೆ ತೆರಳಿ ಮತಯಾಚಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ