ಮತಯಾಚನೆಗೆ ಇನ್ನು ಮೂರು ದಿನಮಾತ್ರ ಸಮಯವಿದೆ; ಕೈ-ಕಾಲು ಹಿಡಿದು ಮತಕೇಳಿ: ಬಿಜೆಪಿ ಕಾರ್ಯಕರ್ತರಿಗೆ ಬಿಎಸ್ ಯಡಿಯೂರಪ್ಪ ಕರೆ

ಹುಬ್ಬಳ್ಳಿ:ಮೇ-8: ಯಾರು ಬಿಜೆಪಿಗೆ ಮತ ನೀಡಲು ನಿರಾಕರಿಸುತ್ತಾರೋ ಅವರ ಕೈ-ಕಾಲು ಹಿಡಿದು ಮತಕೇಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಶಂಕರ್ ಪಾಟೀಲ್ ಮುನೇನಕೊಪ್ಪ ಪರವಾಗಿ ಮತಯಾಚನೆ ಮಾಡಲು ಬಿಜೆಪಿ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಬಿ ಎಸ್ ಯಡಿಯೂರಪ್ಪ, ಮತ ಕೇಳಲು ಕೇವಲ ಮೂರೇ ಮೂರು ದಿನಗಳ ಕಾಲ ಮಾತ್ರ ಸಮಯ ಕೊಡಿ
ಒಂದು ವೇಳೆ ಯಾರು ನಮಗೆ ಮತ ಕೊಡಲ್ವೋ ಅವರ ಕೈ-ಕಾಲು ಹಿಡಿದು ಮತ ಕೇಳಿ ಅಂತಾ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಇನ್ನೂ ಕಳೆದಬಾರಿ ಶಂಕರ್ ಪಾಟೀಲ್‌ಮುನೇನಕೊಪ್ಪ ಸೋತಿರೋದು ಅವರ ತಪ್ಪಿನಿಂದಲ್ಲ. ಆ ಸಂದರ್ಭದಲ್ಲಿ ಬಿಜೆಪಿ ಮೂರು ಹೋಳಾಗಿತ್ತು. ನಂದೊಂದು, ಶ್ರೀ ರಾಮುಲುನದು ಒಂದು ಹಾಗೇ ಮತ್ತೊಂದು ಪಕ್ಷವಾಗಿ ಹೋಳಾಗಿತ್ತು.
ಆದ್ರೆ ನಮಗಿಂದು ನಮ್ಮ ತಪ್ಪಿನ ಅರಿವಾಗಿದ್ದೂ ನಾವೆಲ್ಲಾ ಒಂದಾಗಿದ್ದೇವೆ
ಎಂದರು.

ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಬಿ ಎಸ್ ವೈ ಕಾಂಗ್ರೆಸ್ ಕೊನೆಯ ಸಿಎಂ ಅಂತಾ ಲೇವಡಿ ಮಾಡಿದ್ರು.ಈಬಾರಿ ಬಿಜೆಪಿ ಗೆಲ್ಲಿಸಿಕೊಡಿ. ನಾನು ನವಲಗುಂದ ಕ್ಷೇತ್ರವನ್ನು ದತ್ತು ಪಡೆಯುತ್ತೇನೆ. ಇದು ನನ್ನ ಬಿಜೆಪಿ ಪ್ರಣಾಳಿಕೆಯಲ್ಲ ನಾನು ಸಿಎಂ ಆದ ಮೇಲೆ ಮಂಡಿಸುವ ಬಜೆಟ್ ಭಾಷಣವಾಗಿದ್ದೂ ಮೇ ೧೭ ನೇ ತಾರೀಖು ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ