ಬಾದಾಮಿ ರೆಸಾರ್ಟ್ ನಲ್ಲಿ ಐಟಿ ದಾಳಿ ಹಿನ್ನಲೆ: ನಾವಿಲ್ಲಿ ಊಟಕ್ಕೆಂದು ಬಂದಿದ್ದೆವು; ಸಿಎಂ ಇಬ್ರಾಹಿಂ ಪ್ರತಿಕ್ರಿಯೆ

ಬಾದಾಮಿ: ಮೇ-8: ಬಾದಾಮಿಯಲ್ಲಿ ಕಾಂಗ್ರೆಸ್ ನಾಯಕನ ಒಡೆತನದ ರೆಸಾರ್ಟ್ ಹಾಗೂ ಹೋಟೆಲ್ ಮೇಲೆ ಐಟಿ ದಾಳಿ ನಡೆದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಇಬ್ರಾಹಿಂ, ಈ ರೆಸಾರ್ಟ್ ನಲ್ಲಿ ನಾನು ವಾಸ್ತವ್ಯ ಹೂಡಿರಲಿಲ್ಲ. ನಾನು ಹಾಗೂ ಎಸ್ ಆರ್ ಪಾಟೀಲ್

ಊಟಕ್ಕೆಂದು ಈ ರೆಸಾರ್ಟ್ ಗೆ ಬಂದಿದ್ದೆವು ಎಂದು ಹೇಳಿದ್ದಾರೆ.

ನಾವು ಊಟಕ್ಕೆಂದು ಇಲ್ಲಿ ಬಂದಿದ್ದಾಗ ಐಟಿ‌ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ

ನನ್ನನ್ನ ಏನೂ ಪ್ರಶ್ನೆ ಮಾಡಲಿಲ್ಲ , ಎರಡು ಗಂಟೆ ಬಳಿಕ ಹೊರಹೋಗಲು ಹೇಳಿದ್ರು ಹೊರಟಿದ್ದೇವೆ.

ಒಳಗಡೆ ಏನ್ ಸಿಗುತ್ತೆ ಅಲ್ಲಿ , ಏನು ಇಲ್ಲ , ಐಟಿ ಅಧಿಕಾರಿಗಳು ಸುಮ್ಮನೆ ಕೂತಿದ್ದಾರೆ ಎಂದು ಇಬ್ರಾಹಿಂ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ