ದುಷ್ಕರ್ಮಿಗಳ ಗುಂಪೊಂದು ನಡೆಸಿದ ದಾಳಿಯಲ್ಲಿ ಅಬಕಾರಿ ಇಲಾಖೆಯ ಸಬ್ ಇನ್ಸ್‍ಪೆಕ್ಟರ್ ಒಬ್ಬರ ಸಾವು

ಕೊಕ್ರಾಜಾರ್(ಅಸ್ಸಾಂ), ಮೇ 4- ದುಷ್ಕರ್ಮಿಗಳ ಗುಂಪೊಂದು ನಡೆಸಿದ ದಾಳಿಯಲ್ಲಿ ಅಬಕಾರಿ ಇಲಾಖೆಯ ಸಬ್ ಇನ್ಸ್‍ಪೆಕ್ಟರ್ ಒಬ್ಬರು ಹತರಾಗಿರುವ ಘಟನೆ ಈಶಾನ್ಯ ರಾಜ್ಯ ಅಸ್ಸಾಂನ ಕೊಕ್ರಾಜಾರ್ ಜಿಲ್ಲೆಯ ಉಲ್ಟಾಪಾನಿ ಅರಣ್ಯದ ಬಳಿ ನಡೆದಿದೆ.

ನಾರಾಯಣ ಭೋರಲ್ ಅಪರಿಚಿತ ದುಷ್ಕರ್ಮಿಗಳಿಗೆ ಬಲಿಯಾದ ಎಕ್ಸೈಸ್ ಎಸ್‍ಐ. ಬುಧವಾರ ರಾತ್ರಿ ಅಧಿಕೃತ ಕರ್ತವ್ಯದ ನಂತರ ಕೊಕ್ರಾಜಾರ್ ಪಟ್ಟಣದ ಬಳಿ ಸರಳ್‍ಪರದಲ್ಲಿನ ತಮ್ಮ ಮನೆಗೆ ಹಿಂದಿರುಗುತ್ತಿದ್ದ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಂದು ಪರಾರಿಯಾಗಿದ್ದಾರೆ.

ಈ ಹತ್ಯೆಯನ್ನು ಅಖಿಲ ಅಸ್ಸಾಂ ಗೋರ್ಖಾ ವಿದ್ಯಾರ್ಥಿಗಳ ಒಕ್ಕೂಟ(ಎಎಜಿಎಸ್‍ಯು), ಅಸ್ಸಾಂ ನೇಪಾಲಿ ಸಾಹಿತ್ಯ ಸಭಾ ಮತ್ತಿತರ ಸಂಘಟನೆಗಳು ಖಂಡಿಸಿದ್ದು, ಹಂತಕರನ್ನು ಬಂಧಿಸುವಂತೆ ಆಗ್ರಹಿಸಿವೆ.

ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆ ಕಾರ್ಯ ಆರಂಭಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ