ಜೆನ್ನೊಣಗಳ ದಾಳಿಯಿಂದ ಜಿ.ಪಂ. ಮಾಜಿ ಸದಸ್ಯರೊಬ್ಬರು ಸಾವನ್ನಪ್ಪಿರುವ ಘಟನೆ :

ಚಿತ್ರದುರ್ಗ.ಏ,23- ಜೆನ್ನೊಣಗಳ ದಾಳಿಯಿಂದ ಜಿ.ಪಂ. ಮಾಜಿ ಸದಸ್ಯರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮತ್ತೋಡು ಜಿ.ಪಂ.ಮಾಜಿ ಸದಸ್ಯ ಪಾಥಲಿಂಗಪ್ಪ(69) ಮೃತ ದುರ್ದೈವಿ. ಹೊಸದುರ್ಗ ತಾಲೂಕಿನ ಹೊಸಗೊಲ್ಲಹಳ್ಳಿ ತೋಟದ ಮನೆಯ ಬಳಿ ಪಾಥಲಿಂಗಪ್ಪ ಮೇಲೆ ಏಕಾಏಕಿ ಜೆನ್ನೊಣಗಳು ದಾಳಿ ಮಾಡಿದ್ದವು. ಇದರಿಂದ ತೀವ್ರವಾಗಿ ಗಾಯಗೊಂಡ ಪಾಥಲಿಂಗಪ್ಪ ಸಾವನ್ನಪ್ಪಿದ್ದಾರೆ. ಈ ಸಂಬಂಧ ಸ್ಥಳೀಯ ಪೆÇೀಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ