ನಾಳೆ ಹೊಲೆಯ ಮಾದಿಗರ ಮುಂದಿನ ನಡೆ ಕುರಿತ ವಿಚಾರಣ ಸಂಕಿರಣ

ಬೆಂಗಳೂರು, ಏ.4-ಡಾ.ಬಾಬು ಜಗಜೀವನರ್‍ರಾವ್ ಜನ್ಮ ದಿನಾಚರಣೆ ಅಂಗವಾಗಿ ಬಹಿಷ್ಖೃತ ಹಿತಕಾರಣಿ ಸಭಾದ ವತಿಯಿಂದ ನಾಳೆ ಸಂಜೆ 6 ಗಂಟೆಗೆ ಶಾಸಕರ ಭವನದ ಸಭಾಂಗಣದಲ್ಲಿ ಹೊಲೆಯ ಮಾದಿಗರ ಮುಂದಿನ ನಡೆ ಕುರಿತ ವಿಚಾರಣ ಸಂಕಿರಣ ಏರ್ಪಡಿಸಲಾಗಿದೆ.

ಶ್ರೀ ಬ್ರಹ್ಮಾನಂದ ಮುನಿಸ್ವಾಮೀಜಿ,ಜಾಂಬವ ಪೀಠಾಧಿಪತಿಗಳು, ಶ್ರೀ ನಾಗದೇವ ಸ್ವಾಮಿಗಳು, ಶ್ರೀ ಜ್ಞಾನನ ಪ್ರಕಾಶ ಸ್ವಾಮೀಜಿ ಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಅಧ್ಯಕ್ಷತೆಯನ್ನು ಸಭಾದ ಗೌರವಾಧ್ಯಕ್ಷ ಡಾ.ಎಚ್.ಆರ್.ಸುರೇಂದ್ರ ವಹಿಸಲಿದ್ದು ,ಕಾರ್ಯಾಧ್ಯಕ್ಷ ಜೆ.ಸಿ.ಪ್ರಕಾಶ್ ಪ್ರಾಸ್ತಾವಿಕ ಭಾಷಣ ಹಾಗೂ ಪ್ರಧಾನ ಕಾರ್ಯದರ್ಶಿ ವಿಜಯಮ್ಮ ಸ್ವಾಗತ ಕೋರಲಿದ್ದಾರೆ ಎಂದು ಸಭಾದ ಪ್ರಕಟಣೆ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ