ಸೊಲ್ಲಾಪುರದಲ್ಲಿ ಗುಂಪಿನ ಮೇಲೆ ಕಾರೊಂದು ನುಗ್ಗಿ ಅಪಘಾತ ಸಂಭವಿಸಿದೆ.

ಸೊಲ್ಲಾಪುರ, ಫೆ.27-ರಸ್ತೆ ಬದಿ ಟೀ ಅಂಗಡಿಯಲ್ಲಿ ಚಹಾ ಸೇವಿಸುತ್ತಿದ್ದ ಗುಂಪಿನ ಮೇಲೆ ಕಾರೊಂದು ನುಗ್ಗಿದ ಪರಿಣಾಮ ಮೂವರು ಮೃತಪಟ್ಟು, ಇತರ ಐವರು ತೀವ್ರ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಮಹಾರಾಷ್ಟ್ರ ಜಿಲ್ಲೆಯ ಸೊಲ್ಲಾಪುರದ ತುಳಜಾಪುರದಲ್ಲಿ ಸಂಭವಿಸಿದೆ.
ಈ ಭೀಕರ ಅಪಘಾತದಲ್ಲಿ ವಿಜಯಪುರ ಜಿಲ್ಲೆಯ ಇಬ್ಬರು ಸೇರಿದಂತೆ ಮೂವರು ಸಾವಿಗೀಡಾಗಿದ್ದಾರೆ. ಮೃತರನ್ನು ಟಿಪ್ಪು ಉಮರ್‍ಸಾಬ್ (23), ಅಬ್ದುಲ್ ಸಾಬ್(24) ಮತ್ತು ಚವರ್‍ಸಾಬ್(40) ಎಂದು ಗುರುತಿಸಲಾಗಿದೆ.
ಹೆದ್ಧಾರಿ ಪಕ್ಕದಲ್ಲಿರುವ ಚಹಾ ಅಂಗಡಿಯೊಂದರಲ್ಲಿ ಸುಮಾರು 10 ಮಂದಿ ಟೀ ಕುಡಿಯುತ್ತಿದ್ದರು. ಈದೇ ಸಂದರ್ಭದಲ್ಲಿ ಅತಿ ವೇಗವಾಗಿ ಬಂದ ಕಾರೊಂದು ಗುಂಪಿಗೆ ಅಪ್ಪಳಿಸಿತು. ಈ ದುರಂತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರು. ತೀವ್ರ ಗಾಯಗೊಂಡಿರುವ ಐವರನ್ನು ಸೊಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ