ಮಹಾರಾಷ್ಟ್ರ ಸರ್ಕಾರದಿಂದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಪಧಕ ಗೆದ್ದವರಿಗೆ ನಗದು ಬಹುಮಾನ

ಮುಂಬೈ: ಮಹಾರಾಷ್ಟ್ರ ರಾಜ್ಯವನ್ನು ಪ್ರತಿನಿಧಿಸಿರುವ ಆಟಗಾರರು ಆಸ್ಟ್ರೇಲಿಯಾದಲ್ಲಿ ನೆಡೆಯುತ್ತಿರುವ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ
ಪಧಕ ಗೆದ್ದವರಿಗೆ ರಾಜ್ಯ ಸರ್ಕಾರ ನಗದು ಬಹುಮಾನವನ್ನು ಘೋಶಿಸಿದೆ. ಸ್ವರ್ಣ ಪಧಕ ಗೆದ್ದವರಿಗೆ ತಲಾ 50 ಲಕ್ಷ, ಬೆಳ್ಳಿ ಪಧಕ ಗೆದ್ದವರಿಗೆ ತಲಾ 30 ಲಕ್ಷ ಮತ್ತು ಕಂಚಿನ ಪಧಕ ಗೆದ್ದವರಿಗೆ ತಲಾ 20 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಸರ್ಕಾರ ಹೇಳಿದೆ.

ಇದರ ಜೊತೆಗೆ ಪಧಕ ಗೆದ್ದ ಆಟಗಾರರ ತರಬೇತುದಾರರಿಗೆ ಅಂದರೆ, ಚಿನ್ನದ ಪಧಕ ಗೆದ್ದ ಆಟಗಾರರ ತರಬೇತುದಾರರಿಗೆ ತಲಾ 12.5 ಲಕ್ಷ, ಬೆಳ್ಳಿ ಪಧಕ ಗೆದ್ದ ಆಟಗಾರರ ತರಬೇತುದಾರರಿಗೆ ತಲಾ 7.5 ಲಕ್ಷ ಮತ್ತು ಕಂಚಿನ ಪಧಕ ಗೆದ್ದ ಆಟಗಾರರ ತರಬೇತುದಾರರಿಗೆ ತಲಾ5 ಲಕ್ಷ ನೀಡಲಾಗುವುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ