ಚಾಕು ತೋರಿಸಿ ಬೆದರಿಸಿ ಸರ, ಉಂಗುರ ಕಸಿದುಕೊಂಡು ಮಾರ್ಗಮಧ್ಯೆ ಅವರನ್ನು ಕೆಳಗೆ ತಳ್ಳಿ ಪರಾರಿ

ಬೆಂಗಳೂರು,ಏ.4- ಬಸ್‍ಗಾಗಿ ಕಾಯುತ್ತಿದ್ದ ವ್ಯಕ್ತಿಗೆ ಡ್ರಾಪ್ ಕೊಡುವುದಾಗಿ ಹೇಳಿ ಕ್ಯಾಬ್‍ನಲ್ಲಿ ಹತ್ತಿಸಿಕೊಂಡ ದರೋಡೆಕೋರರ ಚಾಕು ತೋರಿಸಿ ಬೆದರಿಸಿ ಸರ, ಉಂಗುರ ಕಸಿದುಕೊಂಡು ಮಾರ್ಗಮಧ್ಯೆ ಅವರನ್ನು ಕೆಳಗೆ ತಳ್ಳಿ ಪರಾರಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸ್‍ರೋಡ್ ಬಳಿಯ ಕೋನಪ್ಪನ ಅಗ್ರಹಾರ ಬಸ್ ನಿಲ್ದಾಣ ಸಮೀಪ ಸದಾಶಿವ ರೆಡ್ಡಿ ಎಂಬುವರು ರಾತ್ರಿ 10.30ರಲ್ಲಿ ಬಸ್‍ಗಾಗಿ ಕಾಯುತ್ತಿದ್ದರು. ಈ ವೇಳೆ ಇವರ ಬಳಿ ಟಾಟಾ ಇಂಡಿಕಾ ಕ್ಯಾಬ್ ಬಂದಿದೆ. ಈ ಕ್ಯಾಬ್‍ನಲ್ಲಿ ಮೊದಲೇ ಮೂವರು ಕುಳಿತಿದ್ದರು.
ಚಾಲಕ ಎಲ್ಲಿಗೆ ಹೋಗಬೇಕೆಂದು ಸದಾಶಿವ ರೆಡ್ಡಿ ಅವರನ್ನು ವಿಚಾರಿಸಿ ಡ್ರಾಪ್ ಕೊಡುವುದಾಗಿ ಅವರನ್ನು ಕ್ಯಾಬ್‍ನಲ್ಲಿ ಹತ್ತಿಸಿಕೊಂಡಿದ್ದಾನೆ. ಕಾರು ಸ್ವಲ್ಪ ದೂರ ಹೋಗುತ್ತಿದ್ದಂತೆ ಸದಾಶಿವ ರೆಡ್ಡಿ ಅವರಿಗೆ ಚಾಕು ತೋರಿಸಿ ಬೆದರಿಸಿ ಕಲ್ಲಿನಿಂದ ಹೊಡೆದು ಸರ, ಉಂಗುರ, ಕಿತ್ತುಕೊಂಡು ಅವರನ್ನು ಕೆಳಗೆ ತಳ್ಳಿ ಪರಾರಿಯಾಗಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಪೆÇಲೀಸರು ದರೋಡೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ