ರೈಲ್ವೆ ಹಳಿ ದುರಸ್ಥಿ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರ ಮೇಲೆ ರೈಲು ಹರಿದು ಮೂವರು ಸಾವು

ಮುಂಬೈ, ಜ.14 (ಪಿಟಿಐ)-ರೈಲ್ವೆ ಹಳಿ ದುರಸ್ಥಿ ಕಾರ್ಯದಲ್ಲಿ ತೊಡಗಿದ್ದ ಮೂವರು ಕಾರ್ಮಿಕರ ಮೇಲೆ ರೈಲೊಂದು ಹರಿದು ಅವರು ದುರಂತ ಸಾವಿಗೀಡಾಗಿರುವ ಘಟನೆ ಮಹಾರಾಷ್ಟ್ರದ ರಾಯ್‍ಗಢ್‍ನಲ್ಲಿ ಸಂಭವಿಸಿದೆ.

ಮುಂಬೈನಿಂದ 66 ಕಿ.ಮೀ. ದೂರದಲ್ಲಿರುವ ರಾಯ್‍ಗಢ್‍ನ ಪೆನ್ ಪ್ರದೇಶದ ಜಿಟೆ ರೈಲ್ವೆ ನಿಲ್ದಾಣದ ಬಳಿ ಈ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಮುಂಬೈಗೆ ತೆರಳುತ್ತಿದ್ದ ತೇಜಸ್ ಎಕ್ಸ್‍ಪ್ರೆಸ್ ಕಾರ್ಮಿಕರ ಮೇಲೆ ಹರಿಯಿತು ಎಂದು ಪೊಲೀಸರು ತಿಳಿಸಿದ್ಧಾರೆ.

ಈ ದುರ್ಘಟನೆಯಲ್ಲಿ ಸ್ಥಳದಲ್ಲೇ ಮೃತಪಟ್ಟ ಮೂವರನ್ನು ಅಶೋಕ್ ಬರಿ(30), ನಿಮ್‍ಸಿಂಗ್ ಗುಲ್ಕರ್(40) ಮತ್ತು ಅಜಯ್ ದಂಡೋಡಿಯಾ(18) ಎಂದು ಗುರುತಿಸಲಾಗಿದೆ. ಇವೆರಲ್ಲರೂ ಗುತ್ತಿಗೆ ಕಾರ್ಮಿಕರಾಗಿದ್ದು, ಮಧ್ಯಪ್ರದೇಶದವರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ