ನೋಯ್ಡಾ : ತಾಯಿ ಹಾಗೂ ತಂಗಿಯನ್ನು ಕೊಂದು ಬಾಲಾಪರಾಧಿ ನಿಲಯ ಸೇರಿದ್ದ ಬಾಲಕ ಈಗ ಸರ್ಕಾರದ 25 ಸಾವಿರ ನಗದು ಬಹುಮಾನವನ್ನು ಬಾಚಿಕೊಂಡು ಅಚ್ಚರಿ ಮೂಡಿಸಿದ್ದಾನೆ.
ಈ ಹಿಂದೆ ಕಡಿಮೆ ಅಂಕ ಪಡೆದಿದ್ದರ ಬಗ್ಗೆ ಪ್ರಶ್ನಿಸಿದ್ದ ತಾಯಿಯನ್ನು ಬಾಲಕ ಕೊಲೆ ಮಾಡಿದ್ದ. ಮನೆಯಲ್ಲಿದ್ದ ತಂಗಿಯನ್ನೂ ಹತ್ಯೆಗೈದಿದ್ದ. ಕಡಿಮೆ ಅಂಕದ ಬಗ್ಗೆ ಬೈದಿದ್ದಕ್ಕೆ ಸಿಟ್ಟಿಗೆದ್ದು ಪೀಜಾ ಕಟ್ ಮಾಡುವ ಸಾಧನದಿಂದ ತಾಯಿ-ತಂಗಿಯನ್ನು ಕೊಲೆ ಮಾಡಿದ್ದ. ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ರಿಮ್ಯಾಂಡ್ ರೂಂ ಗೆ ಹಾಕಿದ್ದರು.
ರಿಮ್ಯಾಂಡ್ ರೂಂನಲ್ಲಿ ಓದು ಮುಂದುವೆರಿಸಿದ ಬಾಲಕ ಈಗ 10ನೇ ತರಗತಿ ಹಾಗೂ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. 500 ಅಂಕಗಳಿಗೆ 255 ಅಂಕಗಳನ್ನು ಪಡೆದಿದ್ದಾನೆ. ಹೀಗಾಗಿ ಬಾಲಕನ ಮನಪರಿವರ್ತನೆಯಾಗಿದ್ದು, ಉತ್ತಮ ಶೈಕ್ಷಣಿಕ ಸಾಧನೆ ತೋರಿದ್ದಾನೆ ಎಂದು ಯುಪಿ ಸರ್ಕಾರ ಬಾಲಕನಿಗೆ 25 ಸಾವಿರ ನಗದು ಪ್ರೋತ್ಸಾಹ ಧನ ನೀಡಿದೆ.