ದೇಶದಲ್ಲಿ ನಾಲ್ವರಿಗೆ ಗಲ್ಲು: ಇದೇ ಮೊದಲಲ್ಲ

ಹೊಸದಿಲ್ಲಿ: ದಿಲ್ಲಿಯ ಪಟಿಯಾಲಾ ನ್ಯಾಯಾಲಯದ ಆದೇಶದಂತೆ ನಿರ್ಭಯಾ ಪ್ರಕರಣದ ನಾಲ್ವರು ಹಂತಕರನ್ನು ಗಲ್ಲಿಗೇರಿಸಿದರೆ ಅಂಥ ಪ್ರಕರಣ ನಡೆದಿದ್ದು ದೇಶದಲ್ಲಿ ಎರಡನೆಯದ್ದು ಎಂದೆನಿಸಿ ಕೊಳ್ಳಲಿದೆ.
70ರ ದಶಕದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ‘ಜೋಷಿ-ಅಭ್ಯಂಕರ್ ಸರಣಿ ಹತ್ಯೆ ಪ್ರಕರಣ’ದ ಅಪರಾಧಿಗಳಾದ ರಾಜೇಂದ್ರ ಜಕ್ಕಲ್, ದಿಲೀಪ್ ಸುತಾರ್, ಶಾಂತಾರಾಮ್ ಕನ್ಹೋಜಿ ಜಗದೀಪ್ ಹಾಗೂ ಮುನಾವರ್ ಹರುಣ್ ಶಾ ಎಂಬವರಿಗೆ ಪುಣೆಯ ಯರವಾಡ ಕೇಂದ್ರ ಕಾರಾಗೃಹದಲ್ಲಿ 1983ರ ಅ. 25ರಂದು ಗಲ್ಲು ಶಿಕ್ಷೆ ಜಾರಿಗೊಳಿಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ