![download (1)](http://kannada.vartamitra.com/wp-content/uploads/2019/11/download-1-619x381.jpg)
ಮುಂಬೈ : ಅಜಿತ್ ನನಗೆ ಸುಳಿವೆ ಕೊಡದೇ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಎಂದು ಎನ್ ಸಿಪಿ ಮುಖ್ಯಸ್ಥ ಶಾರದ್ ಪವಾರ್ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಶಿವಸೇನೆ ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಜಿತ್ ನನಗೆ ಸುಳಿವೆ ಕೊಡದೇ ಸರ್ಕಾರ ರಚಸಲು ಮುಂದಾಗಿದ್ದಾರೆ. ನಮಗೆ ಸಂಖ್ಯಾ ಬಲ ಇದೆ. ಬಿಜೆಪಿಗೆ ಸಂಖ್ಯಾ ಬಲ ಇಲ್ಲ. ಅಜಿತ್ ಜೊತೆ ಡಜನ್ ಗಟ್ಟಲೇ ಶಾಸಕರು ಮಾತ್ರ ಇದ್ದಾರೆ. ಪಕ್ಷದ ಶಾಸಕರು ನಮ್ಮೊಂದಿಗೆ ಇರುತ್ತಾರೆ ಎಂದು ಶಾರಾದ್ ಪವಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಅಜಿತ್ ಅವರನ್ನ ಪಕ್ಷದಿಂದ ಇನ್ನು ಉಚ್ಚಾಟಿಸದೇ ಇರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. . ಸದ್ಯಕ್ಕೆ ಸಹೋದರ ಅಜಿತ್ ವಿರುದ್ಧ ಶಾರಾದ್ ಪವಾರ್ ಯಾವುದೇ ನಿರ್ಧಾಕ್ಷಣ್ಯ ಕ್ರಮಕ್ಕೆ ಮುಂದಾಗಿಲ್ಲ.