ಎನ್ ಸಿಪಿ ಶಾಸಕಾಂಗ ನಾಯಕನ ಸ್ಥಾನದಿಂದ ಅಜಿತ್ ಪವಾರ್ ಉಚ್ಚಾಟನೆ

ಮುಂಬೈ: ಎನ್ ಸಿಪಿ ಶಾಸಾಕಾಂಗ ಪಕ್ಷದ ನಾಯಕನ ಸ್ಥಾನದಿಂದ ಅಜಿತ್ ಪವಾರ್ ಅವರನ್ನ ವಜಾ ಮಾಡಲಾಗಿದೆ.

ಎನ್ ಸಿಪಿ ಮುಖ್ಯಸ್ಥ ಶಾರದ್ ಪವಾರ್ ಅಜಿತ್ ಕಾಂಗ್ರೆಸ್ ಮತ್ತು ಶಿವ ಸೇನೆ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸುವ ಮುನ್ನ ಻ ಅಜಿತ್ ಪ ವಾರ್ ಅವರನ್ನ ಪಕ್ಷದಿಂದ ಉಚ್ಚಾಟಿಸಿದರು.

ಗುರುವಾರದಿಂದಲೇ ಕ್ಷಿಪ್ರರಾಜಕೀಯ ಕ್ರಾಂತಿ ಆರಂಭವಾಗಿತ್ತು ಎಂದು ತಿಳಿದು ಬಂದಿದೆ. ಸರ್ಕಾರ ರಚನೆಗೆ ಅಜಿತ್ ಪವಾರ್ ಮತ್ತು ಎನ್ ಸಿಪಿಯ ಮುಖಂಡ ಧನಂಜಯ್ ಬೆಂಬಲ ಪತ್ರದೊಂದಿಗೆ ಸಿಎಂ ಫಡ್ನವಿಸ್ ಅವರೊಂದಿಗೆ ಮಾತುಕತೆ ನಡೆಸಿದ್ದರು ಎಂದು ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ