ಹುಟ್ಟಿದ್ದು ಜೆಡಿಎಸ್‍ನಲ್ಲೇ, ಸಾಯುವುದು ಜೆಡಿಎಸ್‍ನಲ್ಲೇ-ಮಾಜಿ ಸಚಿವ ಎಂ.ಸಿ.ಮನಗೂಳಿ

ಬೆಂಗಳೂರು, ಅ.9-ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಮಾಜಿ ಸಚಿವ ಎಂ.ಸಿ.ಮನಗೂಳಿ ಅವರು ಬಿಜೆಪಿ ಸೇರುತ್ತೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದ ಬಗ್ಗೆ  ಚರ್ಚೆ ಮಾಡಲಷ್ಟೆ. ಆ ವೇಳೆ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಇದ್ದರು ಅಷ್ಟೆ.ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ನಾನು ಹುಟ್ಟಿದ್ದು ಜೆಡಿಎಸ್‍ನಲ್ಲೇ, ಸಾಯುವುದು ಕೂಡ ಜೆಡಿಎಸ್‍ನಲ್ಲೇ.ಇಷ್ಟು ವರ್ಷ ಜೆಡಿಎಸ್‍ನಲ್ಲಿದ್ದು ಈಗ ಏಕೆ ಪಕ್ಷ ಬಿಟ್ಟು ಹೋಗಲಿ.ಈಗ ತಮಗೆ 84 ವರ್ಷ ವಯಸ್ಸಾಗಿದೆ.ಈ ವಯಸ್ಸಿನಲ್ಲಿ ಪಕ್ಷ ಬಿಡುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿ¸ಸಿದರು.

ಅನರ್ಹ ಶಾಸಕರು ಯಾರೂ ತಮ್ಮನ್ನು ಭೇಟಿ ಮಾಡಿಲ್ಲ, ಯಾವುದೇ ಚರ್ಚೆಯೂ ಆಗಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ