ಸಂಸದ ಪ್ರತಾಪ್ ಸಿಂಹರವರಿಂದ ಬೇಜವಾಬ್ದಾರಿ ಹೇಳಿಕೆ-ಮಾಜಿ ಸಚಿವ ಎಚ್.ಕೆ.ಪಾಟೀಲ್

ಬೆಂಗಳೂರು, ಅ.2- ಜನರ ಬಗ್ಗೆ ಅನುಕಂಪ ತೋರದ ಪ್ರಧಾನಿ ನರೇಂದ್ರ ಮೋದಿ ದೇವರಾ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್, ಸಂಸದ ಪ್ರತಾಪ್ ಸಿಂಹ ಹೇಳಿಕೆಯನ್ನು ಬೇಜವಾಬ್ದಾರಿ ಹೇಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದರಾಗಿ ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ. ಜನರ ಬದುಕೇ ಬರಿದಾಗಿದೆ. ನೆರೆ-ಬರದಿಂದಾಗಿ ಸಾವಿರಾರು ಗ್ರಾಮಗಳಿಗೆ ಹಾನಿಯಾಗಿದೆ.ಅವೆಲ್ಲವೂ ಪುನಃ ನಿರ್ಮಾಣವಾಗಬೇಕು ಎಂದರು.

ಲಕ್ಷಾಂತರ ಮಂದಿಗೆ ನೆಲೆ ಇಲ್ಲದೆ ಕಂಗಾಲಾಗಿದ್ದಾರೆ.ರಾಜ್ಯದ ಜನರ ಈ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಘೋಷಣೆ ಮಾಡದ ಮೋದಿ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಆದರೆ, ಇಂತಹ ಸಂದರ್ಭದಲ್ಲಿ ವ್ಯತಿರಿಕ್ತ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಜನರ ಬಗ್ಗೆ ಪ್ರಧಾನಿಗೆ ಅನುಕಂಪವಿಲ್ಲವೇ ? ಜನರ ಬದುಕು ನಾಶವಾಗಿದ್ದರೂ ಈ ರೀತಿ ಹೇಳುವುದು ಎಷ್ಟು ಸರಿ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ