ಜೆಡಿಎಸ್ ಅಧಿಕೃತ ವೆಬ್‌ಸೈಟ್ ಗೆ ದೇವೇಗೌಡರಿಂದ ಚಾಲನೆ

ಬೆಂಗಳೂರುಇದೇ ಮೊದಲ ಬಾರಿಗೆ ಪಕ್ಷದ ವೆಬ್ ಸೈಟ್ ಪ್ರಾರಂಭ ಮಾಡಿದ್ದೇವೆ. ಈ ಹಿಂದೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಅವರದ್ದೇ ಸ್ವಂತ ವೆಬ್‌ಸೈಟ್ ಹೊಂದಿದ್ದರು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು. ಬೆಂಗಳೂರಿನ ಜೆಪಿ ಭವನದಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ವೆಬ್ ಸೈಟ್ ಅನ್ನು ಬಿಡುಗಡೆ ಮಾಡಿ ಮಾತನಾಡಿದರು.

ಇಂದು ಪಕ್ಷದಿಂದ ಅಧಕೃತ ವೆಬ್ಸೈಟ್ ಉದ್ಘಾಟನೆ ಮಾಡಲಾಗಿದೆ. ಇದರಿಂದ ಪಕ್ಷದ ಕಾರ್ಯಕ್ರಮಗಳ ಪ್ರಚಾರಕ್ಕೆ ಅನುಕೂಲವಾಗಲಿದೆ ಹಾಗೂ ಸಾಮಾಜಿಕ ಜಾಲತಾಣಗಳ ಮುಖಾಂತರ ಜನತೆಗೆ ತಿಳಿಸುವ ಪ್ರಯತ್ನ ಇದಾಗಿದೆ. ನಮ್ಮ ಪಕ್ಷದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ಅವರಿಗೆ ವೆಬ್‌ಸೈಟ್‌ ನಿರ್ವಹಣೆಯ ಪೂರ್ಣ ಜವಾಬ್ದಾರಿ ನೀಡಲಾಗಿದೆ. ಇದು ಪಕ್ಷದ ಹೆಸರಲ್ಲಿ ನಡೆಯಯಲಿದ್ದು, ಇದರಲ್ಲಿ ಯಾವುದೇ ‌ನೂನ್ಯತೆಗಳಿಲ್ಲ. ಇದರಲ್ಲಿ ನಾನು, ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿ ಗಳು ಇರುತ್ತಾರೆ. ಕಾರ್ಯಕರ್ತರ ಯಾವುದೇ ಸಮಸ್ಯೆ ಇದ್ದರೂ ವೈಬ್‌ಸೈಟ್‌ ಬಳಸಿಕೊಂಡು ಸಂಪರ್ಕಿಸಬಹುದು ಎಂದರು.
ದಿಜಿಟಲ್‌ ಯುಗದಲ್ಲಿ ನಾವು ಸ್ವಲ್ಪ ಹಿಂದೆ ಬಿದ್ದಿದ್ವಿ.ಆದರೆ. ಈಗ ಹೊಸದೊಂದು ಯೋಜನೆ ‌ಮಾಡಿದ್ದೇವೆ. ಇದರಲ್ಲಿ ‌ಅನುಭವ ಇರುವ ಸಿಬ್ಬಂದಿ ಇರುತ್ತಾರೆ. ಹೀಗಾಗಿ ಇದರಿಂದ ‌ಪಕ್ಷದ ಸಂಘಟನೆಗೆ ಅನುಕೂಲ ಆಗಲಿದೆ ಎಂದರು.
ನಾನು ಇಂದು (ಗುರುವಾರ) ಹುಣಸೂರಿಗೆ ಹೋಗ್ತಿದ್ದೇನೆ. ಈಗಾಗಲೇ ನನ್ನ ಮನೆಯಲ್ಲಿ ಹುಣಸೂರಿನ ಹಳೆ ಸ್ನೇಹಿತರ ಜೊತೆ ಸಭೆ ಮಾಡಿದ್ದೇನೆ. ಪ್ರತಿ ಬಾರಿ ಒಂದೊಂದು ‌ಅಭ್ಯರ್ಥಿಗಳನ್ಜು ಹೊರಗಿನಿಂದ ಕರೆದುಕೊಂಡು ಬರ್ತೀರಾ. ಆಮೇಲೆ ಅವರನ್ನು ಗೆಲ್ಲಿಸ್ತೀವಿ ಆದರೆ, ಕೊನೆಗೆ ಅವರು ಪಕ್ಷಕ್ಕೆ ದ್ರೋಹ ಮಾಡಿ ಹೋಗ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರು ಪ್ರಜ್ವಲ್ ನಿಲ್ಲಿಸಿ ನನ್ನನ್ನು ಪಾರ್ಲಿಮೆಂಟ್ ಗೆ ಹೋಗಿ ಎಂದೂ ಕೇಳಿಕೊಂಡಿದ್ದಾರೆ. ಒಬ್ಬ ಯಂಗ್ ಮ್ಯಾನ್ ಪಾರ್ಲಿಮೆಂಟ್ ‌ಗೆ ಹೋಗಿದ್ದಾನೆ ಹೀಗಾಗಿ ನಾನು ಮನೆಯಲ್ಲೇ ಕುಳಿತು ಕೊಂಡು ಪಕ್ಷ ‌ಕಟ್ಟುತ್ತೇನೆ. ಮುಂದಿನ ಅಭ್ಯರ್ಥಿಗೆ ‌ಸಮರ್ಥ ಅಭ್ಯರ್ಥಿ ಕೊಡುತ್ತೇವೆ. ಈಗಾಗಲೇ ಕುಮಾರಸ್ವಾಮಿ ಕೆ ಆರ್ ಪೇಟೆಗ ಹೋಗಿದ್ದು, ನಾನೂ ಅಲ್ಲಿಗೆ ಹೋಗುತ್ತಿದ್ದೇನೆ. ಅಲ್ಲಿನ ಕಾರ್ಯಕರ್ತರು ಯಾರನ್ನು ಗುರುತಿಸುತ್ತಾರೋ ಅವರನ್ನೇ ಅಲ್ಲಿ ಅಭ್ಯರ್ಥಿಯನ್ನಾಗಿ ನಿಲ್ಲಿಸಲಾಗುತ್ತದೆ. ಉಪಚುನಾವಣೆಯಲ್ಲಿ ಕುಟುಂಬದವರ ಸ್ಪರ್ಧೆ ಇಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ