ಬಾಬರಿ ಮಸೀದಿಯಿದ್ದ ಜಾಗದಲ್ಲಿ ರಾಮ ಮಂದಿರವಿತ್ತೆಂದು ಒಪ್ಪಿಕೊಂಡ ವಕ್ಫ್‌ ಮಂಡಳಿ

ಹೊಸದಿಲ್ಲಿ: ವಕ್ಫ್‌ ಮಂಡಳಿ ಅಧ್ಯಕ್ಷ ಜುಫರ್‌ ಅಹ್ಮದ್‌ ಫಾರೂಖಿ ಆಫ್‌ ದಿ ರೆಕಾರ್ಡ್‌ ನೀಡಿರುವ ಹೇಳಿಕೆ ಹೊಸ ಬಿರುಗಾಳಿಯನ್ನು ಎಬ್ಬಿಸಿದೆ. ಬಾಬರಿ ಮಸೀದಿ ಇದ್ದ ಜಾಗದಲ್ಲಿ ರಾಮ ಮಂದಿರ ಇತ್ತು ಎಂಬುದಾಗಿ ಫಾರೂಖಿ ಹೇಳಿದ್ದಾರೆ.

ಒಂದು ಪ್ರಮುಖ ವಿಚಾರವೆಂದರೆ, ಬಾಬರಿ ಮಸೀದಿ ಧ್ವಂಸಗೊಂಡ ದಿನವನ್ನು ಜನರು ಕಪ್ಪು ದಿನವನ್ನಾಗಿ ನೋಡುತ್ತಿರುವುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. 2003ರ ಪುರಾತತ್ವ ವರದಿಯಲ್ಲಿ ದೇವಸ್ಥಾನವಿದ್ದ ಕುರುಹುಗಳು ಮಸೀದಿ ಅಡಿಯಲ್ಲಿ ಪತ್ತೆಯಾಗಿರುವುದಾಗಿ ಹೇಳಿದೆ. ಅಲ್ಲಿ ದೇವಸ್ಥಾನವಿತ್ತು ಎಂದು ವರದಿಯೇ ಹೇಳುತ್ತದೆ. ನಾನೀಗ ಹೇಳುತ್ತಿರುವುದೆಲ್ಲವೂ ಆಫ್‌ ದಿ ರೆಕಾರ್ಡ್‌. ಯಾಕೆಂದರೆ ನಾನು ಒಂದು ಪಕ್ಷದವನು ಮತ್ತು ನನ್ನ ಪಕ್ಷದ ವಿರುದ್ಧ ಮಾತನಾಡಲು ನನಗೆ ಸಾಧ್ಯವಿಲ್ಲ. ಬಾಬರಿ ಮಸೀದಿ ಜಾಗದಲ್ಲಿ ದೇವಸ್ಥಾನ ಇದ್ದಿದ್ದು ನಿಜವಿರಬಹುದು ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಚಿನ್ನದ ಇಟ್ಟಿಗೆ ನೀಡುವುದಾಗಿ ಮೊಘಲ್‌ ಸಾಮ್ರಾಜ್ಯದ ಕೊನೆಯ ದೊರೆಯ ಆರನೇ ಪೀಳಿಗೆಯ ವಂಶಸ್ಥರೊಬ್ಬರು ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರವಿದ್ದ ಜಾಗದಲ್ಲಿ ಮಸೀದಿ ನಿರ್ಮಿಸಿದ್ದು ಮೊಘಲರ ಮೊದಲ ದೊರೆ ಬಾಬರ್‌. ಮೊಘಲ್‌ ಸಾಮ್ರಾಜ್ಯದ ಕೊನೆಯ ದೊರೆ ಬಹಾದೂರ್‌ ಷಾ ಜಾಫರ್‌. ಅವನ ಆರನೇ ಪೀಳಿಗೆಯ ವಂಶಸ್ಥರಾಗಿರುವ ಹಬೀಬುದ್ದೀನ್‌ ಟ್ಯೂಸಿ ಈಗ ಹೈದರಾಬಾದ್‌ನಲ್ಲಿ ವಾಸವಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ