ರಾಜ್ಯದಲ್ಲಿ ಪ್ರವಾಹಕ್ಕೆ 42 ಮಂದಿ ಸಾವು, 2694 ಗ್ರಾಮಗಳು ಕಣ್ಮರೆ

ಬೆಂಗಳೂರು ರಾಜ್ಯದಲ್ಲಿ ಈ ಬಾರಿಯಾದ ಅತಿವೃಷ್ಠಿಗೆ ಜನರು ನಲುಗಿ ಹೋಗಿದ್ದಾರೆ. ಕಂಡರಿಯದ ಭೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕ ಮಂದಿ  ಬೆಚ್ಚಿಬಿದ್ದಿದ್ದಾರೆ. ಒಂದು ತಿಂಗಳ ಹಿಂದೆ ನೀರಿಲ್ಲದ ಸಂಕಟ ಪಟ್ಟವರು ಈಗ ನೀರಿನಿಂದಲೇ ಜೀವನ ಹೋಯಿತು ಎಂದು ಕಣ್ಣೀರಿಟ್ಟಿದ್ದಾರೆ.

ರಾಜ್ಯವನ್ನೇ ಬೆಚ್ಚಿಬೀಳಿಸಿದ ಪ್ರವಾಹಕ್ಕೆ ಅಪಾರ ಸಾವು-ನೋವು ಸಂಭವಿಸಿದ್ದು, ಜನ-ಜಾನುವಾರುಗಳ ಸಾವಿನ ಸಂಖ್ಯೆ ಎರುತ್ತಲೆ ಇದೆ. ಈ ಬಾರಿ ಪ್ರವಾಹಕ್ಕೆ 10 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ. ರಾಜ್ಯದಲ್ಲಿ ಆದ ಪ್ರವಾಹ ನಷ್ಟ ಕುರಿತು ಕೇಂದ್ರ ಗೃಹ ಸಚಿವ ಅಮಿತ್​ ಷಾ ಭಾನುವಾರ ವೈಮಾನಿಕ ಪರಿಶೀಲನೆ ನಡೆಸಿದ್ದು, 100 ಕೋಟಿ ಪರಿಹಾರ ನೀಡಿದ್ದಾರೆ. ಸಿಎಂ ಯಡಿಯೂರಪ್ಪ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಮಾಡುತ್ತಲಿದ್ದು, ಸಂತ್ರಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.

ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದ  ಜನ-ಜಾನುವಾರು, ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ಸಿಎಂ ಕಚೇರಿಯಿಂದ ಅಂಕಿಅಂಶ ಬಿಡುಗಡೆ ಮಾಡಲಾಗಿದ್ದು, ಪ್ರವಾಹದಿಂದಾಗಿ 42 ಜನರು ಸಾವನ್ನಪ್ಪಿದ್ದಾರೆ.

ಆಗಸ್ಟ್​ 1ರಿಂದ ತೀವ್ರಗೊಂಡಿದ್ದ ಪ್ರವಾಹದ ಕುರಿತು ವಿವರ ಬಿಡುಗಡೆಯಾಗಿದ್ದು, ಅದರ ವಿವರ ಇಂತಿದೆ.

  • ಪ್ರವಾಹದಿಂದ ಸಾವನ್ನಪ್ಪಿರುವವರ ಸಂಖ್ಯೆ-42
  • ಪ್ರವಾಹದಿಂದ ಕಣ್ಮರೆಯಾದವರ ಸಂಖ್ಯೆ-12
  • ಪ್ರವಾಹದಿಂದ ಸಾವನ್ನಪ್ಪಿದ ಜಾನುವಾರುಗಳ ಸಂಖ್ಯೆ-548
  • ಪ್ರವಾಹದಿಂದ ಹಾನಿಗೊಳಗಾದ ತಾಲೂಕುಗಳು-86
  • ಪ್ರವಾಹದಿಂದ ಕೊಚ್ಚಿಹೋದ ಗ್ರಾಮಗಳು-2694
  • ಆಗಸ್ಟ್​​1ರಿಂದ ಇಂದಿನವರೆಗೆ ಪ್ರವಾಹದಿಂದ ರಕ್ಷಿಸಿದ ಜನರ ಸಂಖ್ಯೆ-5,81,897
  • ಒಟ್ಟು ತೆರೆದಿರುವ ಗಂಜಿ ಕೇಂದ್ರಗಳು-1181
  • ಗಂಜಿ ಕೇಂದ್ರದಲ್ಲಿರುವ ಜನರ ಸಂಖ್ಯೆ-3,32,629
  • ಪ್ರವಾಹದಿಂದ ಒಟ್ಟು ರಕ್ಷಿಸಿರುವ ಜಾನುವಾರುಗಳು-50,595
  • ಶಿಬಿರದಲ್ಲಿರುವ ಪ್ರಾಣಿಗಳು-32.305
  • ನಷ್ಟವಾಗಿರುವ ಬೆಳೆಗಳು-4,21,514 ಹೆಕ್ಟೇರ್
  • ಹಾನಿಗೊಳಗಾಗಿರುವ ಮನೆಗಳು-31,800​

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ