ನವದೆಹಲಿ,ಆ.8- ಕೇಂದ್ರ ಸರ್ಕಾರದ ಸ್ಟೀಲ್ ಅಥಾರಟಿ ಆಫ್ ಇಂಡಿಯಾ ಲಿಮಿಟೆಡ್ನ ಅಧ್ಯಕ್ಷರ ಮೇಲೆ ನಾಲ್ವರು ಏಕಾಏಕಿ ದಾಳಿ ಮಾಡಿ ಕಬ್ಬಿಣದ ರಾಡ್ಗಳಿಂದ ಹೊಡೆದು ಹಲ್ಲೆ ನಡೆಸಿದ್ದಾರೆ.
ಅನಿಲ್ಕುಮಾರ್ ಚೌಧರಿ ಹಲ್ಲೆಗೊಳಗಾಗಿರುವ ಎಸ್ಎಐಎ ನ ಅಧ್ಯಕ್ಷ.
ಘಟನೆ ವಿವರ: ನಿನ್ನೆ ರಾತ್ರಿ ಚೌಧರಿ ಅವರು ಕಾರಿನಲ್ಲಿ ಬರುತ್ತಿದ್ದಾಗ ನವದೆಹಲಿಯ ಹುಡ್ಕೋ ಕಾಂಪ್ಲೆಕ್ಸ್ ಬಳಿ ಮತ್ತೊಂದು ಕಾರು ಇವರ ಕಾರಿಗೆ ಡಿಕ್ಕಿ ಹೊಡೆದಿದೆ.
ವಾಹನಕ್ಕೇನಾದರೂ ತೊಂದರೆಯಾಗಿದೆಯೇ ಎಂದು ಪರೀಕ್ಷಿಸಲು ಚೌಧರಿ ಮತ್ತು ಅವರ ಚಾಲಕ ಕಾರಿನಿಂದಿಳಿದು ಪರಿಶೀಲಿಸುತ್ತಿದ್ದಾಗ ಡಿಕ್ಕಿ ಹೊಡೆದ ಕಾರಿನ ನಾಲ್ವರು ಕಬ್ಬಿಣದ ರಾಡ್ಗಳಿಂದ ಇವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಮೀಪದಲ್ಲೇ ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ಧಾವಿಸಿ ಹಲ್ಲೆ ನಡೆಸಿದ್ದು, ಹಲ್ಲೇ ಮಾಡಿದ ನಾಲ್ವರ ಪೈಕಿ ಇಬ್ಬರನ್ನು ಬಂಧಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಚೌಧರಿ ಅವರನ್ನು ಆಲ್ ಇಂಡಿಯ ಮೆಡಿಕಲ್ ಇನ್ಸ್ಟಿಟ್ಯೂಟ್ ಸೈನ್ಸ್ಸ್ ಟ್ರೌಮಾ ಸೆಂಟರ್ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಸ್ಥಳೀಯ ಠಾಣೆ ಪೊಲೀಸರು ವಶಕ್ಕೆ ಪಡೆದಿರುವ ಇಬ್ಬರು ದಾಳಿಕೋರರನ್ನು ವಿಚಾರಣೆ ನಡೆಸುತ್ತಿದ್ದು, ತಪ್ಪಿಸಿಕೊಂಡಿರುವ ಮತ್ತಿಬ್ಬರ ಶೋಧಕ್ಕೆ ಕ್ರಮ ಕೈಗೊಂಡಿದ್ದಾರೆ.