ಮುಂಬೈಗೆ ತೆರಳಿರುವ ಅತೃಪ್ತರಿಗೆ ಪಕ್ಷ ನಿಷ್ಠೆಯಿಲ್ಲ

ಮಂಗಳೂರು, ಜು.27- ಮುಂಬೈಗೆ ಹೋದವರಿಗೆ ಪಕ್ಷ ನಿಷ್ಠೆ ಇಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಗುಡುಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಬಿಟ್ಟ ಎಚ್.ವಿಶ್ವನಾಥ್ ಪಕ್ಷ ನಿಷ್ಠೆಯನ್ನು ಬಿಟ್ಟಿದ್ದಾರೆ ಎಂದು ಟೀಕಿಸಿದರು.

ಮುಂಬೈಗೆ ತೆರಳಿರುವ ಅತೃಪ್ತರಿಗೆ ಪಕ್ಷ ನಿಷ್ಠೆ ಇಲ್ಲ. ಒಂದು ಪಕ್ಷದಿಂದ ಗೆದ್ದು ರೆಸಾರ್ಟ್‍ಗೆ ಹೋಗಿ ಕೂರುವುದು ಸರಿಯಲ್ಲ ಎಂದರು.

ಯಾವ ಆಧಾರದ ಮೇಲೆ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಪ್ರಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ