ನಾನು ಮುಂಬೈಗೂ ಹೋಗೋಲ್ಲ, ದೆಹಲಿಗೂ ಹೋಗಲ್ಲ, ಬೆಂಗಳೂರಿನಲ್ಲೇ ಇರ್ತೀನಿ: ರಾಮಲಿಂಗಾರೆಡ್ಡಿ

ಬೆಂಗಳೂರುರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ದೊರೆಯದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ, ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ನಾನು ಮುಂಬೈಗೂ ಹೋಗೋಲ್ಲ, ದೆಹಲಿಗೂ ಹೋಗಲ್ಲ, ಬೆಂಗಳೂರಿನಲ್ಲೇ ಇರ್ತೀನಿ ಎಂದಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿಟಿಎಂ ಲೇಔಟ್‌ನ ಕಾಂಗ್ರೆಸ್‌ ಶಾಸಕ ರಾಮಲಿಂಗಾ ರೆಡ್ಡಿ, ನಾನು ರಾಜಕೀಯಕ್ಕೆ ಬಂದು ಮೂರು ದಶಕಗಳಾಗಿವೆ. ನಾನು ಮಂತ್ರಿ ಆಗಬೇಕೆಂದು ಎಂದೂ ಲಾಬಿ ಮಾಡಿಲ್ಲ. ಈಗಲೂ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ, ನಾನು ಮುಂಬೈಗೂ ಹೋಗೋಲ್ಲ, ದೆಹಲಿಗೂ ಹೋಗಲ್ಲ, ಬೆಂಗಳೂರಿನಲ್ಲೇ ಇರ್ತೀನಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಜೀನಾಮೆ ನೀಡಿ ಮುಂಬೈಗೆ ತೆರಳಿರುವ ಅತೃಪ್ತ ಶಾಸಕರ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಮಲಿಂಗಾ ರೆಡ್ಡಿ, ಯಾವುದೇ ಶಾಸಕರು ನನ್ನನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ