ದಿಡೀರ್ 11 ಮಂದಿ ಶಾಸಕರ ರಾಜೀನಾಮೆ-ಸ್ಪೀಕರ್ ಕಾರ್ಯದರ್ಶಿ, ರಾಜಭವನಕ್ಕೆ ಭೇಟಿ

ಬೆಂಗಳೂರು,ಜು.06-ಅನಿರೀಕ್ಷಿತ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರ ಪತನವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕೆ ಪೂರಕವಾಗಿ 11 ಮಂದಿ ಶಾಸಕರು ದಿಡೀರನೆ ಸ್ಪೀಕರ್ ಕಚೇರಿಗೆ ಬಂದು ಅವರ ಕಾರ್ಯದರ್ಶಿಗೆ ಪತ್ರ ಸಲ್ಲಿಸಿದ್ದಾರೆ. ಮೂವರು ಜೆಡಿಎಸ್ ಮತ್ತು ಎಂಟು ಮಂದಿ ಕಾಂಗ್ರೇಸ್ ಶಾಸಕರಿದ್ದಾರೆ. ಈ ಮಧ್ಯೆ ಪ್ರತಿಕ್ರಿಯೆ ನೀಡಿರುವ ರಮೇಶ್ ಕುಮಾರ್ ಮಂಗಳವಾರ ಕಚೇರಿಗೆ ಆಗಮಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದೇ ವೇಳೆ ಸರ್ಕಾರ ಅಸ್ಥಿರಗೊಂಡಿರುವ ಬಗ್ಗೆ ಆತಂಕಗೊಂಡಿರುವ ಸಿಎಂ ಕುಮಾರಸ್ವಾಮಿ ಇಂದು ರಾತ್ರಿ ಯಾವುದೇ ಸಂದರ್ಭದಲ್ಲಿ ಬೆಂಗಳೂರಿಗೆ ಆಗಮಿಸಿ ಸ್ಪೀಕರ್ ಜೊತೆ ಚಚಿಸಿಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ