ಯಾವುದೇ ಕಾಂಗ್ರೇಸ್ ನಾಯಕರನ್ನು ಭೇಟಿಯಾಗುವುದಿಲ್ಲ-ಶಾಸಕ ಆನಂದ್‍ಸಿಂಗ್

ಬೆಂಗಳೂರು, ಜು.4- ನಗರದಲ್ಲಿ ಇಂದು ಯಾವುದೇ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುವುದಿಲ್ಲ. ನೇರ ಹೊಸಪೇಟೆಗೆ ಹೋಗುತ್ತೇನೆ ಎಂದು ಶಾಸಕ ಆನಂದ್‍ಸಿಂಗ್ ಹೇಳಿದರು.

ಕೋರ್ಟ್‍ಗೆ ಹಾಜರಾಗಲು ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಕೆಲಸ ಮುಗಿದಿದೆ. ನೇರ ಹೊಸಪೇಟೆಗೆ ಹೋಗುತ್ತೇನೆ ಹೊರತು ಯಾವುದೇ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುವುದಿಲ್ಲ, ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದರು.

ನನ್ನ ಮಾತು ಏನಿದ್ದರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತ್ರ. ನನ್ನ ಬೇಡಿಕೆಗಳಿಗೆ ಸ್ಪಂದಿಸಿದರೇ ಮಾತ್ರ. ನನ್ನ ಮುಂದಿನ ನಡೆ ನಿರ್ಧರಿಸುತ್ತೇನೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ