ಸುರೇಶ್ ಕುಮಾರ್ಗೆ ಶರಣಾದ ಕೆಪಿಎಸ್‌ ಸಿ – ಜುಲೈ 29 ರಿಂದ ಸಂದರ್ಶನ_ಲಿಖಿತದಲ್ಲಿ ಸ್ಪಷ್ಟನೆ

ಕೆ.ಎ.ಸ್.ಅಭ್ಯರ್ಥಿಗಳ ಸಂದರ್ಶನದ ದಿನಾಂಕವನ್ನು ಪ್ರಕಟಿಸ ಬೇಕೆಂದು ಆಗ್ರಹಿಸಿ ಇಂದು ಬೆಳಿಗ್ಗೆ 8.00 ಗಂಟೆಯಿಂದ ನಾನು ಕೆ ಪಿ ಎಸ್ ಸಿ ಎದುರು #ಉಪವಾಸ_ಸತ್ಯಾಗ್ರಹ ಪ್ರಾರಂಭಿಸಿದೆ.

*ನಾನು ಪ್ರತಿಭಟನೆ ನಡೆಸುತ್ತಿದ್ದ ಜಾಗಕ್ಕೆ ಕೆ.ಪಿ.ಎಸ್.ಸಿ. ಅಧಿಕಾರಿಗಳು ಬಂದು ಜುಲೈ 29 ರಿಂದ ಸಂದರ್ಶನಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು*.

ನಾನು ಈ ತೀರ್ಮಾನದ ಬಗ್ಗೆ ಲಿಖಿತ ಮೂಲಕ ಮಾಹಿತಿಯನ್ನು ನೀಡಬೇಕೆಂದು ಆಗ್ರಹಿಸಿದೆ. *ನಂತರ ಕೆ.ಪಿ.ಎಸ್.ಸಿ.ಕಾರ್ಯದರ್ಶಿ ಶ್ರೀ ಜನ್ನು ರವರು ನನಗೆ ಲಿಖಿತ ಮೂಲಕ “2015 ರ ಗೆಜೆಟೆಡ್ ಪ್ರೊಬೇಷನರ್ ಬ್ಯಾಚ್ ಅಭ್ಯರ್ಥಿಗಳಿಗೆ ಜುಲೈ 29 ರಿಂದ ಸಂದರ್ಶನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ*.
ಈ ಎಲ್ಲಾ ಅಭ್ಯರ್ಥಿಗಳಿಗೆ ಇಂದು ಸಂದರ್ಶನ ದಿನಾಂಕದ ಭರವಸೆ ದೊರಕಿರುವುದಕ್ಕೆ ನಾನು ಅಭಿನಂದನೆ ಸಲ್ಲಿಸುವೆ. ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಹೋರಾಟದಲ್ಲಿ ಭಾಗಿಯಾಗಿದ್ದರು.
ದಿನಾಂಕ : 01-07-2019 ಸೋಮವಾರದಂದು ನಾನು ಘೋಷಿಸಿ ದಂತೆ ಇಂದು ಕೆ.ಪಿ.ಎಸ್.ಸಿ. ಕಛೇರಿಯ ಮುಂದೆ #ಉಪವಾಸ_ಸತ್ಯಾಗ್ರಹವನ್ನು
ಬೆಳಿಗ್ಗೆ.8.00 ಗಂಟೆಗೆ ಪ್ರಾರಂಭಿಸಿದೆ.

*ಹಿನ್ನೆಲೆ:*
2015 ರ ಬ್ಯಾಚ್ ನ KAS ಅಧಿಕಾರಿಗಳ ಆಯ್ಕೆಗಾಗಿ ಅಧಿಸೂಚನೆ ಹೊರಬಿದ್ದಿದ್ದು 12-05-2017 ರಂದು.

ಅದರ ಪೂರ್ವಭಾವಿ ಪರೀಕ್ಷೆ( preliminary exam) ನಡೆದದ್ದು 20-08-2017 ರಂದು.

ಮುಖ್ಯ ಪರೀಕ್ಷೆ ( Mains) ನಡೆದದ್ದು 2017 ರ ಡಿಸೆಂಬರ್ 16 ರಿಂದ 23 ರವರೆಗೆ.
ಆದರೆ ಒಂದು ವರ್ಷ ಕಳೆದರೂ ಫಲಿತಾಂಶ ದೊರಕಿರಲಿಲ್ಲ.ನಾನು ಈ ಕುರಿತು ಕೆ.ಪಿ.ಎಸ್.ಸಿ. ಅಧ್ಯಕ್ಷರು, ಕಾರ್ಯದರ್ಶಿ, ಎಲ್ಲರೊಡನೆ ಚರ್ಚಿಸಿ ಫಲಿತಾಂಶ ಬೇಗ ನೀಡಬೇಕೆಂದು ಆಗ್ರಹಿಸಿದ್ದೆ.

23-11-2018 ರಂದು ರಾಜ್ಯದ ಮುಖ್ಯಮಂತ್ರಿ ಗಳಿಗೆ ಈ ಕುರಿತು ಪತ್ರ ಬರೆದಿದ್ದೆ.

ದಿ.04-12-2018 ರಂದು ಕೆ.ಎ.ಸ್ ಮುಖ್ಯ ಪರೀಕ್ಷೆಗಳ ಫಲಿತಾಂಶ ಪ್ರಕಟಿಸ ಬೇಕೆಂದು ಕೆ.ಪಿ.ಎಸ್.ಸಿ ಕದ ತಟ್ಟುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆ.

ಕೊನೆಗೂ ಒಂದು ವರ್ಷ ಒಂದು ತಿಂಗಳ ನಂತರ ಅಂದರೆ 28-01-2019 ರಂದು ಕೆ.ಎ.ಎಸ್ 2015 ನೇ ಬ್ಯಾಚ್ ಮುಖ್ಯ ಪರೀಕ್ಷೆಗಳ ಫಲಿತಾಂಶ ಪ್ರಕಟವಾಯಿತು.

ತದನಂತರ ಸಂದರ್ಶನದ ದಿನಾಂಕಕ್ಕಾಗಿ ಅಭ್ಯರ್ಥಿಗಳು ಕಾಯತೊಡಗಿದರು. ಆದರೆ ಅನೇಕ ಪ್ರಯತ್ನಗಳ ಮತ್ತು ಹೋರಾಟದ ನಂತರವೂ ಸಂದರ್ಶನದ ದಿನಾಂಕವನ್ನು ಪ್ರಕಟಿಸಲಿಲ್ಲ.

  1. ಆದ್ದರಿಂದ ನಾಡಿನ ವಿದ್ಯಾವಂತ ಯುವವಿರೋಧಿ ಕೆ.ಪಿ.ಎಸ್.ಸಿ.ಕಾರ್ಯವೈಖರಿ ಬದಲಾವಣೆಯಾಗದಿದ್ದರೆ ಈ ಸಂಸ್ಥೆಯ ಸ್ಥಾಪನೆಯ ಉದ್ದೇಶವೇ ವಿಫಲವಾಗುತ್ತದೆ.
    ಜುಲೈ 29 ರಿಂದ ಪ್ರಾರಂಭವಾಗುವ ಸಂದರ್ಶನ ಹೋಟಾ ಸಮಿತಿಯ ಶಿಫಾರಸಿನಂತೆ ಪಾರದರ್ಶಕವಾಗಿ ನಡೆಯಬೇಕೆಂದು ಮತ್ತು ಯಾವುದೇ ಅನ್ಯಾಯಕ್ಕೆ ಅವಕಾಶ ನೀಡಬಾರದೆಂದು ನಾನು ಆಗ್ರಹಿಸುತ್ತೇನೆ.
    *-ಎಸ್.ಸುರೇಶ್ ಕುಮಾರ್*,
    *ಶಾಸಕರು,ರಾಜಾಜಿನಗರ*

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ