ಶಾಸಕ ಮುನಿರತ್ನಂರವರಿಂದ ಇಂದಿರಾ ಕ್ಯಾಂಟೀನ್ ಬಗ್ಗೆ ಆರೋಪ

ಬೆಂಗಳೂರು, ಜೂ.28-ಇಂದಿರಾ ಕ್ಯಾಂಟೀನ್ ಬಗ್ಗೆ ಆಡಳಿತ ಪಕ್ಷದ ಶಾಸಕ ಮುನಿರತ್ನ ಆರೋಪ ಮಾಡಿ ಪಾಲಿಕೆ ಸಭೆಯಲ್ಲಿ ಗಮನ ಸೆಳೆದರು.

ಇಂದಿರಾ ಕ್ಯಾಂಟೀನ್‍ಗಳಲ್ಲಿ ಆಹಾರದ ಗುಣಮಟ್ಟ ಸರಿಯಿಲ್ಲ. ಹಾಗಾಗಿ ಇಂದಿರಾ ಕ್ಯಾಂಟೀನ್‍ಗಳಿಗೆ ಬರುವ ಸಾರ್ವಜನಿಕರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.

ತಕ್ಷಣ ಇಂದಿರಾ ಕ್ಯಾಂಟೀನ್‍ಗಳ ಟೆಂಡರ್ ರದ್ದುಗೊಳಿಸಿ, ಕ್ಷೇತ್ರವಾರು ಟೆಂಡರ್ ನೀಡುವಂತೆ ಅವರು ಒತ್ತಾಯಿಸಿದರು.

ಮೊದಲ ಬಾರಿಗೆ ಇಂದಿರಾ ಕ್ಯಾಂಟೀನ್‍ಗಳ ಬಗ್ಗೆ ಸತ್ಯ ಹೇಳಿದ್ದೀರಾ ಎಂದು ಶಾಸಕ ಸತೀಶ್‍ರೆಡ್ಡಿ ಮುನಿರತ್ನ ಅವರ ಕಾಲೆಳೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ