ಗ್ರಾಮವಾಸ್ತವ್ಯ ಬಹಳ ಒಳ್ಳೆಯ ಕಾರ್ಯಕ್ರಮ-ಸಚಿವ ನಾಗೇಶ್

ಬೆಂಗಳೂರು,ಜೂ.27- ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ ಬಹಳ ಒಳ್ಳೆಯ ಕಾರ್ಯಕ್ರಮ ಎಂದು ಸಣ್ಣ ಕೈಗಾರಿಕಾ ಸಚಿವ ನಾಗೇಶ್ ತಿಳಿಸಿದರು.

ವಿಕಾಸ ಸೌಧದಲ್ಲಿ ತಮ್ಮ ಕಚೇರಿಗೆ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ತಾವಿನ್ನೂ ಹೊಸ ಸಚಿವರಾಗಿದ್ದು, ಸ್ವತಂತ್ರವಾಗಿ ಗ್ರಾಮ ವಾಸ್ತವ್ಯ ಮಾಡುವುದಿಲ್ಲ. ಆದರೆ ಮುಖ್ಯಮಂತ್ರಿ ನಮ್ಮ ಕ್ಷೇತ್ರ ಸೇರಿದಂತೆ ಎಲ್ಲೆ ಗ್ರಾಮವಾಸ್ತವ್ಯ ಮಾಡಿದರೂ ನನ್ನ ಅವಶ್ಯಕತೆ ಇದ್ದರೆ ಅಲ್ಲಿಗೆ ಹೋಗುವುದಾಗಿ ಹೇಳಿದರು.

ತಾವು ಇಂಜಿನಿಯರಿಂಗ್ ಪದವೀಧರರಾಗಿದ್ದು, ಈ ಖಾತೆಯ ಜವಾಬ್ದಾರಿಯನ್ನು ನಿಭಾಯಿಸಬಲ್ಲೆ ಎಂಬ ವಿಶ್ವಾಸದಿಂದ ನನಗೆ ಈ ಖಾತೆ ಸಿಎಂ ಅವರು ಕೊಟ್ಟಿದ್ದಾರೆ ಎಂದರು.

ಪಕ್ಷೇತರರಾಗಿದ್ದರೂ ನಾವು ಆಪರೇಷನ್ ಕಮಲಕ್ಕೆ ತುತ್ತಾಗಿರಲಿಲ್ಲ. ಸರ್ಕಾರ ಸುಭದ್ರವಾಗಿರಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ