ಕೆಂಪೇಗೌಡ ಪ್ರಶಸ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು, ಜೂ. 10- ರಾಜ್ಯ ಮಟ್ಟದ ನಾಡಪ್ರಬು ಕೆಂಪೇಗೌಡರವರ 510ನೇ ಜನ್ಮ ಶತಮಾನೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಂದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಲು ಜನಸೇವಾ ಸಂಸ್ಥೆ ಅರ್ಜಿ ಆಹ್ವಾನಿಸಿದೆ.

ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರು, ಸಮಾಜಸೇವೆ, ಸಾಹಿತ್ಯ ರಂಗಭೂಮಿ, ಚಲನಚಿತ್ರ, ನೃತ್ಯ, ಸಂಗೀತ, ಕನ್ನಡಸೇವೆ, ಚಿತ್ರಕಲೆ, ಸಾಂಸ್ಕøತಿಕಕ್ಷೇತ್ರ, ಯೋಗ, ಕ್ರೀಡೆ, ವೈದ್ಯಕೀಯ, ಛಾಯಾಗ್ರಾಹಕ, ಕೃಷಿ, ಶಿಕ್ಷಣ, ಪರಿಸರವಾದಿಗಳು, ನ್ಯಾಯವಾದಿಗಳು, ಉತ್ತಮ ಚಾಲಕರು, ಉದ್ಯಮ, ಪತ್ರಿಕಾ ಕ್ಷೇತ್ರ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಜನಸೇವಾ ಸಂಸ್ಥೆ ನಂ.3/1, 8ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಪಟೇಲ್ ಹನುಮ್ಪ ಬಿಲ್ಡಿಂಗ್, ಮೊದಲನೇ ಮಹಡಿ, ಶಿವನಗರ, ಬೆಂಗಳೂರು-560010.ಮೊಬೈಲ್- 9741191373, 8431265509, 8197903275, 9591326778 ಸಂಪರ್ಕಿಸಬಹುದು ಎಂದು ಸಂಸ್ಥೆ ರಾಜ್ಯಾಧ್ಯಕ್ಷ ಡಾ. ಎಚ್.ಬಿ.ರಾಜೇಗೌಡ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ